ಬೈ ಎಲೆಕ್ಷನ್ ಗೆಲುವಿನ ರೂವಾರಿ ಡಿಕೆಶಿಗೆ ಅಭಿನಂದನೆ

ಬುಧವಾರ, 12 ಜೂನ್ 2019 (19:11 IST)
ರಾಜ್ಯದ ಗಮನ ಸೆಳೆದಿದ್ದ ಬೈ ಎಲೆಕ್ಷನ್ ನಲ್ಲಿ ಗೆಲುವಿನ ನಗೆ ಬೀರಲು ಕಾರಣರಾದ ಸಚಿವ ಡಿಕೆ ಶಿವಕುಮಾರ್ ಗೆ ಅಭಿನಂದನೆಗಳ ಮಹಾಪೂರ ಸಲ್ಲಿಕೆಯಾಗಿದೆ.

ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಕುಸುಮಾವತಿ ಶಿವಳ್ಳಿ ಅವರ ಗೆಲುವಿನ ರೂವಾರಿ, ಜಲ ಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸನ್ಮಾನಿಸಿದರು.  ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿರುವ ಸಚಿವರ ನಿವಾಸದಲ್ಲಿ ಭೇಟಿ ಮಾಡಿದ ಕ್ಷೇತ್ರದ ಮುಖಂಡರು ಅಭಿನಂದನೆ ಸಲ್ಲಿಸಿದರು.

ತೀವ್ರ ಪೈಪೋಟಿ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ಉಪಚುನಾವಣೆಯಲ್ಲಿ ಶಿವಳ್ಳಿ ಅದ್ಭುತ ಜಯ ದಾಖಲು ಮಾಡಿದ್ದರು. ಈ ಜಯದ ಹಿಂದೆ ಸಚಿವ ಡಿ.ಕೆ.ಶಿವಕುಮಾರ ಪರಿಶ್ರಮ ಇತ್ತು. ಸಚಿವ ಡಿಕೆ ಶಿವಕುಮಾರ ಗೆ ಕುಂದಗೋಳ ಬೈ ಎಲೆಕ್ಷನ್ ಉಸ್ತುವಾರಿಯನ್ನು ಕೈ ಪಡೆ ನೀಡಿತ್ತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ