ಕಾಂಗ್ರೆಸ್ ಪಾಪದಿಂದಲೇ ಶಾಸಕರ ಮನೆಗೆ ಬೆಂಕಿ

ಶುಕ್ರವಾರ, 14 ಆಗಸ್ಟ್ 2020 (22:22 IST)
ಕಾಂಗ್ರೆಸ್ ಪಕ್ಷ ಹಾಗೂ ಮುಖಂಡರ ವಿರುದ್ಧ ಎಂಎಲ್ ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್ ನವರು ಮಾಡಿರುವ ಪಾಪದಿಂದಾಗಿಯೇ ಆ ಪಕ್ಷದ ಶಾಸಕರ ಮನೆ ಬೆಂಕಿಯಿಂದ ಸುಟ್ಟಿದೆ ಎಂದಿದ್ದಾರೆ.

ಸಿಎಎ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ, ವಿಧಾನ ಸಭೆ ಮಾಜಿ ಸಭಾಧ್ಯಕ್ಷ ರಮೇಶ್ ಕುಮಾರ್ ಇನ್ನಿತರರು ಭಾಷಣ ಮಾಡಿದ ಫಲ ಈಗ ಕಾಣುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಬೆಂಕಿಯಿಂದ ಮನೆ ಕಳೆದುಕೊಂಡ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸಕ್ಕೆ ಕಾಂಗ್ರೆಸ್ ನ ಯಾವ ಮುಖಂಡರೂ ಹೋಗುತ್ತಿಲ್ಲ, ಸಮಾಧಾನ ಮಾಡುತ್ತಿಲ್ಲ ಎಂದು ಟೀಕೆ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ