ತಬ್ಲಿಘಿ ನಂಟಿನಿಂದ ಕೊರೊನಾ ವೈರಸ್ ಬಂದು ಹಣ್ಣಿನ ವ್ಯಾಪಾರಿ ಸಾವು

ಭಾನುವಾರ, 12 ಏಪ್ರಿಲ್ 2020 (18:35 IST)
ಕಲಬುರಗಿಯಲ್ಲಿ ಕೊರೊನಾ ವೈರಸ್ ನಿಂದಾಗಿ ಸಾವನ್ನಪ್ಪಿದ ಹಣ್ಣಿನ ವ್ಯಾಪಾರಿಗೆ ತಬ್ಲಿಘಿ ನಂಟು ಇರೋದು ಖಚಿತವಾಗಿದೆ.

ನಿಜಾಮುದ್ದೀನ್ ತಬ್ಲಿಘಿ ಜಮಾತ್ ಸಭೆಯಲ್ಲಿ ಪಾಲ್ಗೊಂಡು ವಾಪಸ್ ಆಗಿದ್ದ ವ್ಯಕ್ತಿಯೊಬ್ಬನ ಸಂಪರ್ಕಕ್ಕೆ ಮೃತ ವ್ಯಾಪಾರಿ ಬಂದಿದ್ದನು ಎಂಬುದು ಖಚಿತವಾಗಿದೆ.

ಈ ಮೊದಲು ಮೃತ ವ್ಯಕ್ತಿ ಮಹಾರಾಷ್ಟ್ರದಲ್ಲಿರುವ ತನ್ನ ಸೊಸೆ ಮನೆಗೆ ಹೋಗಿ ವಾಪಸ್ ಬರುವಾಗ ವೈರಸ್ ತಗುಲಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿತ್ತು.

ಆದರೆ ಅದು ಹುಸಿಯಾಗಿದ್ದು, ತಬ್ಲಿಘಿಯಿಂದಲೇ ಹಣ್ಣಿನ ವ್ಯಾಪಾರಿಗೆ ಕೊರೊನಾ ವೈರಸ್ ಬಂದು ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ