ಕಾಂಗ್ರೆಸ್ ನಲ್ಲಿ ಸಾರಾ ಸಗಟಾಗಿ ಧರೋಡೆ..‌ಭ್ರಷ್ಟಾಚಾರ : ಅಶ್ವಥ್ ನಾರಾಯಣ

ಶನಿವಾರ, 5 ಆಗಸ್ಟ್ 2023 (21:26 IST)
ಗೃಹ ಇಲಾಖೆಯಲ್ಲಿ ವೈ ಎಸ್ ಟಿ ಹಸ್ತಕ್ಷೇಪದ ಬಗ್ಗೆ ಹೆಚ್ ಡಿಕೆ ಆರೋಪ ವಿಚಾರಕ್ಕೆ ಬಿಜೆಪಿ ಮಾಜಿ ಸಚಿವ ಅಶ್ವಥ್ ನಾರಾಯಣ ದನಿಗೂಡಿಸಿದ್ದಾರೆ...ಗೃಹ ಇಲಾಖೆಯಲ್ಲಿ ಹಸ್ತಕ್ಷೇಪ ಇರಬಾರದು ಅಂಥಾ ಸುಪ್ರೀಂಕೋರ್ಟ್ ನಲ್ಲಿ ಆದೇಶ‌ ಇದೆ...ಪೊಲೀಸ್ ಬೋರ್ಡ್ ಸ್ಥಾಪನೆಯಾದ ಮೇಲೆ ಸರ್ಕಾರ ಹಸ್ತಕ್ಷೇಪ ಮಾಡಬಾರದು ಅಂತಾ ಇದೆ.ಈಗ ಆರ್ಡರ್ ಆಗಿರೋದನ್ಬ ತಡೆ ಹಿಡಿಯೋಕೆ ಆಗೋದಿಲ್ಲ ಆದ್ರೆ ಎಲ್ಲಾ ಕಾನೂನು ‌ಗಾಳಿಗೆ‌ತೂರಲಾಗಿದೆ..ಇದು ಸಂಪೂರ್ಣ ಕಾನೂನು ಉಲ್ಲಂಘನೆ ನೀವು ಏನಾದರೂ ಹೇಳ್ಕೊಳ್ಳಿ,‌ಮಾಡ್ಕೊಳ್ಳಿ‌ನಾವು ಇರೋದೆ‌ ಹೀಗೆ ಅಂತಾರೆ..ಇವರಿಂದ ನ್ಯಾಯ ಪಡೆಯೋದು ಕಷ್ಟ.‌ಬಹಳ ಬಂಡತನವಾಗಿದೆ ಇದನ್ನ ಸಂಪೂರ್ಣ ವಾಗಿ‌ ಖಂಡಿಸುತ್ತೇನೆ.. ಕಾನೂನು ಸುವ್ಯವಸ್ಥೆ ಕುಸಿದಿದೆ..ಈ ಸರ್ಕಾರದ ಕೊಡುಗೆ ಅಂದ್ರೆ ಜನರಿಗೆ‌ಭಾಗ್ಯ ಕೊಟ್ಟು‌ ಭ್ರಷ್ಟಾಚಾರದ ಮೂಲಕ ಎಲ್ಲಾ ಮಂತ್ರಿಗಳೂ ಎಲ್ಲಾ ಭಾಗ್ಯ ಮಾಡ್ಕೊತಿದಾರೆ..ಸಾರಾ ಸಗಟಾಗಿ ಧರೋಡೆ..‌ಭ್ರಷ್ಟಾಚಾರ ಮಾಡ್ತಿದಾರೆ ಎಂದು ಕಿಡಿ ಕಾರಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ