ಸಣ್ಣ ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ

ಮಂಗಳವಾರ, 6 ಜೂನ್ 2023 (14:30 IST)
ಸಣ್ಣ ನೀರಾವರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಸಣ್ಣ ನೀರಾವರಿ ಸಚಿವ S.N ಬೋಸರಾಜುಗೆ ತನಿಖೆಯ ಸವಾಲು ಎದುರಾಗಿದೆ. ತಾಂತ್ರಿಕ ಮಾದರಿಗಳನ್ನು ಕಡೆಗಣಿಸಿ 1,166 ಸೌರಚಾಲಿತ ನೀರಿನ ಪಂಪ್​​ ಘಟಕಗಳನ್ನ ಅಳವಡಿಸಿ ಅಕ್ರಮ ಎಸಗಲಾಗಿದೆ. ರಾಜ್ಯದ 18 ಜಿಲ್ಲೆಗಳ SC, ST ಜನಾಂಗದ ರೈತರಿಗೆ ಪಂಗನಾಮ ಹಾಕಲಾಗಿದೆ. ಟೆಂಡರ್ ನಿಯಮ ಉಲ್ಲಂಘಿಸಿ ಕಡಿಮೆ ಸಾಮರ್ಥ್ಯದ ಸೌರಚಾಲಿತ ನೀರಿನ ಪಂಪಗಳ ಪೂರೈಕೆ ಮಾಡಲಾಗಿದೆ.. ಕಡಿಮೆ ಸಾಮರ್ಥ್ಯದ ಸೌರಚಾಲಿತ ನೀರಿನ ಪಂಪ್​​​ ಪೂರೈಕೆ ಮಾಡಿದ ಏಜೆನ್ಸಿಗೆ 71.62 ಕೋಟಿ ಹಣ ಪಾವತಿಸಿ ಇಲಾಖೆಯಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ.. ಇದರ ತನಿಖೆ ಹೊಸ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಉನ್ನತ ಸಾಮರ್ಥ್ಯದ ಸ್ವಯಂ ಚಾಲಿತ ಸೌರ ಘಟಕಗಳ ಅನಗತ್ಯ ಖರೀದಿಗೆ 8 ಕೋಟಿ ಪಾವತಿಸಿ ಅಕ್ರಮ ಎಸಗಲಾಗಿದೆ. ಟೆಂಡರ್ ನಿಯಮದಲ್ಲಿನ ಮಾದರಿ ಮಾನದಂಡಗಳನ್ನ ಉಲ್ಲಂಘಿಸಿ ಸೌರ ಪಂಪ್​ಗಳ ಖರೀದಿ ನಡೆದಿದೆ. ಲೆಕ್ಕ ತಪಾಸಣೆ ವೇಳೆಯಲ್ಲಿ ಈ ಅಕ್ರಮ ಬಯಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ