ಕಬ್ಬಿನ ಲಾರಿಯ ಮೇಲೆ ಕಾಡಾನೆಗಳ ದಾಳಿ

ಮಂಗಳವಾರ, 6 ಜೂನ್ 2023 (13:17 IST)
ಚಾಮರಾಜನಗರ ಹಾಗೂ ತಮಿಳುನಾಡಿನ ರಾಷ್ಟ್ರೀಯ ಹೆದ್ದಾರಿ ಹಸನೂರು ಬಳಿ‌ ಬೆಳ್ಳಂಬೆಳಿಗ್ಗೆ ಕಾಡಾನೆ ಪ್ರತ್ಯಕ್ಷವಾಗಿದೆ. ಪ್ರತಿನಿತ್ಯ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ಅಡ್ಡಗಟ್ಟಿ ಸವಾರರಿಗೆ ಈ ಕಾಡಾನೆ ತೊಂದರೆ ಕೊಡುತ್ತಿದೆ. ಕಬ್ಬಿನ ಲಾರಿ ಹಾಗೂ ತರಕಾರಿ ಲಾರಿಗಳು ಹೈವೇಗೆ ಬಂದರೆ ಸಾಕು ತನ್ನ ಮರಿಯೊಂದಿಗೆ ಆ ವಾಹನಗಳನ್ನ ಅಡ್ಡಕಟ್ಟಿ ಲೂಟಿ ಮಾಡುತ್ತಿತ್ತು. ಇದರಿಂದ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.. ಈ ಕುರಿತು ಅರಣ್ಯ ಅಧಿಕಾರಿಗಳು ಗಮನ ಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ