ಮುಸ್ಲಿಂ ಯುವತಿಯೊಂದಿಗೆ ಮಗ ಪರಾರಿ: ಮರಕ್ಕೆ ಕಟ್ಟಿ ತಂದೆ ತಮ್ಮನಿಗೆ ಥಳಿತ

ಬುಧವಾರ, 28 ಜೂನ್ 2017 (11:27 IST)
ದಲಿತರೇ ರಾಷ್ಟ್ರಪತಿಯಾಗುತ್ತಿರುವ ಈ ಸಂದರ್ಭದಲ್ಲೇ ದಲಿತರನ್ನ ಮರಕ್ಕೆ ಕಟ್ಟಿ ಹೊಡೆದಿರುವ ಅಮಾನುಷ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಹಾಳಗುಂಡಕನಾಳ ಗ್ರಾಮದಲ್ಲಿ ನಡೆದಿದೆ.

ನಿಂಗಪ್ಪ ಹರಿಜನ ಎಂಬಾತ ಅಲ್ಪಸಂಖ್ಯಾತ ಯುವತಿ ಮಾಶಾಬಿ ಎಂಬುವರನ್ನ ಪ್ರೀತಿಸಿ ಕರೆದುಕೊಂಡು ಹೋಗಿದ್ದಾನೆ. ಹೀಗಾಗಿ, ಯುವತಿಯ ಕಡೆಯವರು ನಿಂಗಪ್ಪನ ತಂದೆ ಮರೇಪ್ಪ ಹರಿಜನ ಅವರನ್ನ ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ತಂದೆಯನ್ನ ಬಿಡಿಸಿಕೊಳ್ಳಲು ಹೋದ ರಮೇಶ್`ನನ್ನ ಸಹ ಮರಕ್ಕೆ ಕಟ್ಟಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ನಡುಬೀದಿಯಲ್ಲೇ ಹಲ್ಲೆ ನಡೆಯುತ್ತಿದ್ದರೂ ಯಾರೊಬ್ಬರೂ ಬಿಡಿಸಿಕೊಳ್ಳಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಮರೇಪ್ಪ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ