ಜುಬಲಿಯಂಟ್ ಕಾರ್ಖಾನೆ ತನಿಖೆ ವಿಳಂಬ; ಸರ್ಕಾರದ ವಿರುದ್ಧ ಅಸಮಾಧಾನಗೊಂಡ ಬಿಜೆಪಿ ಶಾಸಕ

ಮಂಗಳವಾರ, 5 ಮೇ 2020 (10:13 IST)
Normal 0 false false false EN-US X-NONE X-NONE

ಬೆಂಗಳೂರು : ಜುಬಲಿಯಂಟ್ ಕಾರ್ಖಾನೆ ತನಿಖೆ ವಿಳಂಬವಾಗುತ್ತಿರುವುದಕ್ಕೆ ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್  ತಮ್ಮ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

 

ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಆದ್ರೆ ಯಾವ ಕಡೆಯಿಂದ ಒತ್ತಡ ಇದೆ ಗೊತ್ತಿಲ್ಲ. ಕಾರ್ಖಾನೆ ನಿರ್ಲಕ್ಷ್ಯದ ವಿರುದ್ಧ ದನಿ ಎತ್ತಿದೆ. ಈ ವೇಳೆ ನನ್ನ ಪರ ಸರ್ಕಾರ ನಿಲ್ಲಬೇಕಾಗಿತ್ತು. ಕಾರ್ಖಾನೆಗೆ ಮಣಿದಿದೆ ಏನೋ ಎಂದು ಅನುಮಾನ. ನನ್ನ ಒತ್ತಾಯಕ್ಕೆ ಒಬ್ಬ ಅಧಿಕಾರಿ ನೇಮಿಸಿತ್ತು ಅಷ್ಟೇ. ತನಿಖೆಗೆ ಬೇರೆ ಇಲಾಖೆಗೂ ಸಹಕಾರ ನೀಡಲಿಲ್ಲ. ಜುಬಲಿಯಂಟ್ ನಿಂದ ನಂಜನಗೂಡಿಗೆ ದೊಡ್ಡ ಕಳಂಕ ಎಂದು ನಂಜನಗೂಡಿನ ಬಿಜೆಪಿ ಶಾಸಕ ಹರ್ಷವರ್ಧನ್  ಕಿಡಿಕಾರಿದ್ದಾರೆ.
 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ