ಧರ್ಮಸ್ಥಳದ ಏರೋಸ್ಪೇಸ್ ಉದ್ಯೋಗಿ ಪಂಜಾಬ್ನಲ್ಲಿ ನಿಗೂಢ ಸಾವು: ಕೊಲೆ ಶಂಕೆ, ಸಮಗ್ರ ತನಿಖೆಗೆ ತಾಯಿ ಒತ್ತಾಯ
ಶಾಸಕ ಹರೀಶ್ ಪೂಂಜ ಅವರು ಕುಟುಂಬದವರನ್ನು ಭಾನುವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿ ಸಾಂತ್ವಾನ ಹೇಳಿದ್ದಾರೆ. ಆಕಾಂಕ್ಷ ಅವರ ಸಾವು ಕೊಲೆಯಾಗಿರಬುಹುದು, ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ, ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಶಾಸಕರಲ್ಲಿ ಅವರ ತಾಯಿ ಆಗ್ರಹಿಸಿದರು.