ಧರ್ಮಸ್ಥಳ ಕೇಸ್: ಚಿನ್ನಯ್ಯನ್ನನ್ನು ಬೆಳ್ತಂಗಡಿಯಿಂದ ಎಸ್ಐಟಿ ಶಿಫ್ಟ್ ಮಾಡಿದ್ದೆಲ್ಲಿಗೆ

Krishnaveni K

ಶನಿವಾರ, 30 ಆಗಸ್ಟ್ 2025 (09:54 IST)
ಬೆಳ್ತಂಗಡಿ: ಧರ್ಮಸ್ಥಳ ಕೇಸ್ ನಲ್ಲಿ ಪ್ರಮುಖ ಆರೋಪಿ ಚಿನ್ನಯ್ಯನನ್ನು ಪೊಲೀಸರು ಬೆಳ್ತಂಗಡಿ ಠಾಣೆಯಿಂದ ಶಿಫ್ಟ್ ಮಾಡಿದ್ದಾರೆ. ಆತನನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬುದು ಈಗ ಸೀಕ್ರೆಟ್ ಆಗಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಕತೆ ಕಟ್ಟಿದ್ದ ಚಿನ್ನಯ್ಯ ಈಗ ಸತ್ಯ ಬಾಯ್ಬಿಟ್ಟಿದ್ದಾನೆ. ಆತ ಎಸ್ಐಟಿ ವಶದಲ್ಲಿದ್ದಾನೆ. ಬುರುಡೆ ಗ್ಯಾಂಗ್ ನಿರ್ದೇಶನದ ಮೇರೆಗೆ ಹಣದ ಆಸೆಗೆ ಈ ಕೃತ್ಯವೆಸಗಿದ್ದಾಗಿ ಒಪ್ಪಿಕೊಂಡಿದ್ದ.

ಇದೀಗ ಆತನ ಹಿನ್ನಲೆ ತನಿಖೆಗೆ ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಆತ ಮಂಡ್ಯ ಮೂಲದವನಾಗಿದ್ದು ತಮಿಳಿನಾಡಿನಲ್ಲಿ ನೆಲೆಸಿದ್ದ ಎನ್ನಲಾಗಿತ್ತು. ಹೀಗಾಗಿ ಈಗ ಈ ಎರಡೂ ಕಡೆ ಆತನನ್ನು ಕರೆದುಕೊಂಡು ಹೋಗಿ ತನಿಖೆ ನಡೆಸಲು ಎಸ್ಐಟಿ ಮುಂದಾಗಿದೆ.

ಇದೇ ಕಾರಣಕ್ಕೆ ಈಗ ಆತನನ್ನು ತಮಿಳುನಾಡು ಅಥವಾ ಮಂಡ್ಯಕ್ಕೆ ಕರೆದೊಯ್ಯಲಾಗಿದೆ ಎನ್ನಲಾಗಿದೆ. ಆದರೆ ನಿಖರವಾಗಿ ಆತನನ್ನು ಎಲ್ಲಿಗೆ ಶಿಫ್ಟ್ ಮಾಡಲಾಗಿದೆ ಎಂಬುದನ್ನು ಎಸ್ಐಟಿ ರಹಸ್ಯವಾಗಿಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ