ರಾಜಕಾರಣಕ್ಕೆ ಧ್ರುವನಾರಾಯಣ್ ಬಲಿಯಾಗಿದ್ದಾರೆ : ಎನ್.ಮಹೇಶ್

ಭಾನುವಾರ, 12 ಮಾರ್ಚ್ 2023 (07:03 IST)
ಮೈಸೂರು : ಒತ್ತಡದ ರಾಜಕಾರಣಕ್ಕೆ ಮಾಜಿ ಸಂಸದ ಆರ್.ಧ್ರುವನಾರಾಯಣ್ ಬಲಿಯಾಗಿದ್ದಾರೆ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬೇಸರ ವ್ಯಕ್ತಪಡಿಸಿದರು.
 
ಕೆಪಿಸಿಸಿ ರಾಜ್ಯಾಧ್ಯಕ್ಷ ಧ್ರುವನಾರಾಯಣ್ ಅವರ ಅಂತಿಮ ದರ್ಶನ ಪಡೆದು ಬಳಿಕ ಮಾತನಾಡಿದ ಎನ್.ಮಹೇಶ್, ದಲಿತ ಸಮುದಾಯಕ್ಕೆ ಒತ್ತಡ ತಡೆಯುವ ಶಕ್ತಿ ಇಲ್ಲ. ಎರಡು ಬಾರಿ ಎಂಪಿ ಆಗಿದ್ದವರು. ಶಾಸಕರಾಗಲು ಇಷ್ಟೊಂದು ಒತ್ತಡ ತಗೋಬೇಕಿತ್ತಾ? ಅವರು ಕೇಳಿದ ಕಡೆ ಟಿಕೆಟ್ ಕೊಡಬೇಕಿತ್ತು ಎಂದು ಕಾಂಗ್ರೆಸ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. 

ಅವರ ಪಕ್ಷದವರು ಆ ಸ್ಥಾನವನ್ನು ಅವರಿಗೆ ಬಿಟ್ಟುಕೊಡಬೇಕಿತ್ತು. ದಲಿತ ಸಮುದಾಯಕ್ಕೆ ಒತ್ತಡ ತಡೆದುಕೊಳ್ಳುವ ಶಕ್ತಿ ಇರಲ್ಲ. ಒಂದು ಎಂಎಲ್ಎ ಸ್ಥಾನಕ್ಕೆ ಧ್ರುವನಾರಾಯಣ್ ಇಷ್ಟು ಒತ್ತಡ ತಗೊಂಡ್ರಾ ಎಂದು ಎನ್.ಮಹೇಶ್ ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ