ವಿಶ್ವವಿಖ್ಯಾತ ಬೆಂಗಳೂರು ಕರಗ ಉತ್ಸವಕ್ಕೆ ವಿಘ್ನ ತರಲು ನಡೆದಿತ್ತ ಹುನ್ನಾರ?

ಮಂಗಳವಾರ, 11 ಏಪ್ರಿಲ್ 2023 (17:20 IST)
ಕರಗ ಹೊತ್ತ ಜ್ಞಾನೇಂದ್ರನನ್ನು ಕಿಡಿಗೇಡಿಗಳು ಟಾರ್ಗೆಟ್ ಮಾಡಿದ್ದಾರೆ.ಉತ್ಸವದ ವೇಳೆ ತನ್ನ ಮೇಲೆ ಹಲ್ಲೆಯಾಗಿರುವ ಬಗ್ಗೆ
ಜ್ಞಾನೇಂದ್ರ ಆರೋಪ ಮಾಡಿದ್ದಾರೆ.ಕರಗ ಹೊತ್ತ ಜ್ಞಾನೇಂದ್ರ ಮೈ ತುಂಬಾ ಸುಟ್ಟ ಗಾಯಗಳಾಗಿದೆ.ಹೋವಿನೊಂದಿಗೆ ಕರದ ಪುಡಿ ಹಾಗೂ ಅನ್ಯ ವಸ್ತುಗಳನ್ನು ಬೆರಸಿ ಎರೆಚಿದ್ದಾರೆ.ಹಾಗಾಗಿ ಮೈ ಸಂಪೂರ್ಣ ಸುಟ್ಟಿದ್ದು, ಹಲ್ಲೆ ಮಾಡಿದಾರೆ. ಇದೀಗ ಜ್ಞಾನೇಂದ್ರ ಮೈ ಮೇಲೆ ಆಗಿರುವ ಸುಟ್ಟ ಗಾಯಗಳ ವಿಡಿಯೋ ವೈರಲ್ ಆಗಿದೆ.
 
ಹೂವಿನೊಂದಿಗೆ ಕೆಮಿಕಲ್ ಮಿಕ್ಸ್ ಮಾಡಿ ಎರಚಿರೋದಾಗಿ ಆರೋಪ  ಮಾಡಲಾಗಿದ್ದು,ಈಗಾಗ್ಲೇ ಕರಗವನ್ನೆ ಟಾರ್ಗೆಟ್ ಮಾಡಿ‌ ಕೆಮಿಕಲ್ ನಿಂದ ಹಾನಿ ಮಾಡಿದ ಕಿಡಿಗೇಡಿ ಬಗ್ಗೆ ಮಾಹಿತಿ  ಆಡಳಿತ ಮಂಡಳಿ ಕಲೆಹಾಕಿದೆ.ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ನಂತರ ಕಂಪ್ಲೇಟ್ ನೀಡೋದಾಗಿ ಕರಗ ಉತ್ಸವ ಸಮಿತಿ‌ ಹೇಳಿದೆ.ಘಟನೆ ಸಂಬಂಧ ದೊಡ್ಡದೊಂದು ಟೀಮ್ ವರ್ಕ್ ಮಾಡಿರೋದಾಗಿ ಆಡಳಿತ ಮಂಡಳಿ ಅನುಮಾನ ವ್ಯಕ್ತಪಡಿಸಿದೆ.ಅಲ್ಲದೇ ಈ ಬಗ್ಗೆ ಸುದೀರ್ಘ ತನಿಖೆಯಾಗಬೇಕು ಎಂದು ಆಡಳಿತ ಮಂಡಳಿ ಒತ್ತಾಯಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ