ದಿನೇಶ್ ಗುಂಡೂರಾವ್ ಗೆ ಮಾಫಿಯಾಗಳ ಜೊತೆ ದೋಸ್ತಿ ಇದೆ-ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ

ಭಾನುವಾರ, 24 ನವೆಂಬರ್ 2019 (11:27 IST)
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗೆ ಮಾಫಿಯಾಗಳ ಜೊತೆ ದೋಸ್ತಿ ಇದೆ ಎಂದು ಅನರ್ಹ ಶಾಸಕ ಸುಧಾಕರ್ ಹೊಸ ಬಾಂಬ್ ಸಿಡಿಸಿದ್ದಾರೆ.



ತಮ್ಮ ಬಗ್ಗೆ ಟೀಕಿಸಿದ ದಿನೇಶ್ ಗುಂಡೂರಾವ್ ವಿರುದ್ಧ ಕಿಡಿಕಾರಿದ ಸುಧಾಕರ್, ದಿನೇಶ್ ಮಾಲೀಕತ್ವದ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಗಳಿವೆ. ಬೆಂಗಳೂರಿನ ಅಕ್ರಮ ಚಟುವಟಿಕೆಗಳಲ್ಲಿ ದಿನೇಶ್ ಪಾಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.


ಅಲ್ಲದೇ ಗಾಂಧಿ ನಗರದಲ್ಲಿ ದಿನೇಶ್ ಹಫ್ತಾ ವಸೂಲಿ ಮಾಡುತ್ತಾರೆ. ಇಂತಹ ದಿನೇಶ್ ಗೆ ಬೇರೆಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ