45 ದಿನ ಡೆಡ್ ಲೈನ್ ನೀಡಿದ ದಿಂಗಾಲೇಶ್ವರ ಸ್ವಾಮೀಜಿ

ಭಾನುವಾರ, 23 ಫೆಬ್ರವರಿ 2020 (17:30 IST)
ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ ವಿವಾದ ಮತ್ತೆ ಗರಿಗೆದರಿದ್ದು, ದಿಂಗಾಲೇಶ್ವರ ಸ್ವಾಮೀಜಿ 45 ದಿನಗಳ ಡೆಡ್ ಲೈನ್  ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಸತ್ಯ ದರ್ಶನ ಸಭೆಯಲ್ಲಿ ಮಾತನಾಡಿರೋ ದಿಂಗಾಲೇಶ್ವರ ಸ್ವಾಮೀಜಿ, ನಾನು ಬೇಡ ಎಂದರೂ ಮುಜಗು ಅವರು ಕರೆಮಾಡಿ ನನ್ನನ್ನು ಉತ್ತರಾಧಿಕಾರಿಯಾಗಿ ಮಾಡೋದಾಗಿ ಹೇಳಿದ್ರು.

ಆದರೆ ನಾನು ಉತ್ತರಾಧಿಕಾರಿ ಆಗ್ತೀನಿ ಅಂತ ಗೊತ್ತಾದ ಮೇಲೆ ನನ್ನ ಮೇಲೆ ಕೊಲೆಯತ್ನ, ಪಿತೂರಿ ಆರಂಭಗೊಂಡಿವೆ. ನಾನು ದೊಡ್ಡಮಠದ ಸ್ವಾಮೀಜಿ ಆಗಬೇಕು ಅಂತ ಅಂದುಕೊಂಡಿಲ್ಲ, ಆದರೆ ದೊಡ್ಡಮಟ್ಟದ ಸ್ವಾಮೀಜಿ ಆಗುವೆ ಎಂದಿದ್ದಾರೆ.

ಮೂರು ಸಾವಿರ ಮಠದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿರುವೆ. ಉತ್ತರಾಧಿಕಾರಿ ವಿಷಯವನ್ನು ಸಾರ್ವಜನಿಕವಾಗಿ, ಭಕ್ತರು, ಸ್ವಾಮೀಜಿಗಳ ನಡುವೆ ತೀರ್ಮಾನಿಸುವುದನ್ನು ಬಿಟ್ಟು ಅವರು ಕೋರ್ಟ್ ಮೊರೆ ಹೋಗಿದ್ದಾರೆ ಅಂತ ದೂರಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ