ಪ್ರತಿಷ್ಠೆಗಾಗಿ ಬಿಜೆಪಿಗರ ನಡುವೆ ಪೈಪೋಟಿ ; ಡಿಸಿಸಿ ಬ್ಯಾಂಕ್ ಗದ್ದುಗೆ ಗುದ್ದಾಟ ಶುರು

ಭಾನುವಾರ, 23 ಫೆಬ್ರವರಿ 2020 (16:48 IST)
ಬೆಳಗಾವಿ ಡಿಸಿಸಿ ಬ್ಯಾಂಕ್ ಗದ್ದುಗೆ ಗುದ್ದಾಟ ಈ ಬಾರಿಯೂ ತೀವ್ರ ಕುತೂಹಲ ಹುಟ್ಟುಹಾಕಿದ್ದು, ಬಿಜೆಪಿ ನಾಯಕರೇ ಪೈಪೋಟಿಯಲ್ಲಿರೋದು ವಿಶೇಷ.

ಕಳೆದ ಸಲ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಪ್ರತಿಷ್ಠೆಯ ಕಣವಾಗಿ ರಾಜ್ಯದ ಗಮನ ಸೆಳೆದಿತ್ತು.
ಈ ಬಾರಿ ಬಿಜೆಪಿ ಮುಖಂಡರೇ ಡಿಸಿಸಿ ಬ್ಯಾಂಕ್ ಗದ್ದುಗೆ ಗುದ್ದಾಟಕ್ಕೆ ಪ್ರತಿಷ್ಠೆ ಪಣಕ್ಕಿಟ್ಟಿದ್ದಾರೆ.

 ಮಾರ್ಚ್ ನಲ್ಲಿ ಚುನಾವಣೆ ನಡೆಯಲಿದ್ದು, ಸಚಿವರಾದ ರಮೇಶ್ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಶಾಸಕ ಉಮೇಶ್ ಕತ್ತಿ ಗುಂಪುಗಳ ನಡುವೆ ಪೈಪೋಟಿ ಶುರುವಾಗಿದೆ. ರಮೇಶ್ ಕತ್ತಿ ಹಾಲಿ ಅಧ್ಯಕ್ಷರಾಗಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ