ಪಕ್ಷದಲ್ಲಿ ಚರ್ಚಿಸಿ ನಿರ್ಧಾರ-ಮಾಜಿ ಸಿಎಂ ಜಗದೀಶ್​​​​ ಶೆಟ್ಟರ್​​

ಶುಕ್ರವಾರ, 31 ಮಾರ್ಚ್ 2023 (16:00 IST)
ವರುಣಾದಿಂದ BJP ರಾಜ್ಯ ಉಪಾಧ್ಯಕ್ಷ B.Y ವಿಜಯೇಂದ್ರ ಕಣಕ್ಕಿಳಿಯುತ್ತಾರೆ ಎಂಬ ವಿಚಾರಕ್ಕೆ ಮಾಜಿ ಸಿಎಂ ಜಗದೀಶ್​​​​ ಶೆಟ್ಟರ್​​ ಪ್ರತಿಕ್ರಿಯಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಆ ವಿಚಾರವಾಗಿ ಚರ್ಚೆ ಮಾಡ್ತಾರೆ. ನನ್ನ ಗಮನಕ್ಕೆ ಯಾವುದು ಬಂದಿಲ್ಲ.. ಪಕ್ಷದ ವೇದಿಕೆಯಲ್ಲಿ ಏನು ಚರ್ಚೆ ಆಗುತ್ತೆ ನೋಡೋಣ ಎಂದು ಹೇಳಿದ್ರು. ಆಪರೇಷನ್ ಕಮಲಕ್ಕೆ ಬಲಿಯಾದವರನ್ನ ಕಾಂಗ್ರೆಸ್ ಎಂದಿಗೂ ವಾಪಾಸ್​​ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಅಂತ ಹೇಳುತ್ತಿದ್ದವರು
ಈಗ ಮತ್ತೆ ಯಾಕೆ ಫೋನ್​​​ ಮಾಡಿ ಕರೆಯುತ್ತಿದ್ದಾರೆಂದು ಶೆಟ್ಟರ್ ಪ್ರಶ್ನಿಸಿದ್ರು. ಕಾಂಗ್ರೆಸ್ ಮುಗಿದು ಹೋದ ಅಧ್ಯಾಯ. ಇತ್ತೀಚಿನ ಚುನಾವಣೆಗಳನ್ನ ಗಮನಿಸಿದ್ರೆ, ಮೇಘಾಲಯ, ಛತ್ತಿಸ್​​ಗಡ್, ನಾಗಾಲ್ಯಾಂಡ್​​ನಲ್ಲಿನ ಫಲಿತಾಂಶದಲ್ಲಿ ಕಾಂಗ್ರೆಸ್​ ಧೂಳಿಪಟವಾಗಿದೆ.. ಈ ಮೂಲಕ ಕಾಂಗ್ರೆಸ್​ನ ಅವಸಾನ ಪ್ರಾರಂಭವಾಗಿದೆ ಎಂದು ಜಗದೀಶ್​​ ಶೆಟ್ಟರ್​​ ವ್ಯಂಗ್ಯವಾಡಿದ್ರು. BJP ಒಳ ಒಪ್ಪಂದ ಮಾಡಿಕೊಂಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್​ನವರಿಗೆ ಭಯ ಶುರುವಾಗಿದೆ.. ಕಾರ್ನಾಟಕದಲ್ಲಿ ಒಳ ಒಪ್ಪಂದ ಮಾಡಿಕೊಳ್ಳಲ್ಲ. ರಾಜ್ಯದಲ್ಲಿ ಬಿಜೆಪಿ ಸ್ವಂತ ಸಂಖ್ಯೆಯಲ್ಲಿ ಅಧಿಕಾರಕ್ಕೆ ಬರುತ್ತೆ. ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಹಾಗೆ ಹೇಳಿದ್ದಾರೆ ಎಂದು ತಿವಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ