ರಾಹುಲ್ ಗಾಂಧಿಯನ್ನು ಅನರ್ಹ ಮಾಡಿದ್ರು ಕಾಂಗ್ರೆಸ್ ಗೆ ಬುದ್ಧಿ ಬಂದಿಲ್ಲ ..!

ಮಂಗಳವಾರ, 28 ಮಾರ್ಚ್ 2023 (19:34 IST)
ಸಿಎಂ ಬೊಮ್ಮಾಯಿ ಒಬ್ಬ ಶಕುನಿ ಇದ್ದಂದೆ ಎಂಬ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಹೇಳಿಕೆ ವಿರುದ್ಧ ಇಂದು ಬಿಜೆಪಿಯ ಎಂ ಎಲ್ ಸಿ ಛಲವಾದಿ ನಾರಾಯಣಸ್ವಾಮಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ..ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಸಿಎಂ ಬೊಮ್ಮಾಯಿ ಅವರನ್ನು ಶಕುನಿಗೆ ಹೋಲಿಕೆ ಮಾಡಿ ಮಾತಾಡಿದ್ದಾರೆ.ಒಬ್ಬ ಸಿಎಂ ರನ್ನು ಯಾವ ರೀತಿ ನಮೂದಿಸಬೇಕು ಎಂದು ಗೊತ್ತಿಲ್ಲಅವರ ಮುಖಂಡ ರಾಹುಲ್ ಗಾಂಧಿ ಪಾಲಸಿ ಮುಂದುವರೆಸಿದ್ದಾರೆ.ರಾಹುಲ್ ಗಾಂದಿ ಬಾಯಿಗೂ ಬೀಗ ಇಲ್ಲ ಇವರಿಗೂ ಬೀಗ ಇಲ್ಲ...ಸಿಎಂ ನ ಶಕುನಿಗೆ ಹೋಲಿಸಿದರೆ ನಿಮ್ಮನ್ನ ನಾವು ಶಿಖಂಡಿ ಅನ್ನಬಹುದು ಅಲ್ಲವೇ ಅದರೆ ನಾವು ಆಗೇ ಅನ್ನೋಲ್ಲ ಇಂತ ಕೆಟ್ಟ ಪದ ಬಳಕೆ ಮಾಡೋಕೆ ನಿಮಗೆ ಯಾವ ಯೋಗ್ಯತೆ ಇದೆ..ಪ್ರಧಾನಿಯನ್ನೇ ನಿಂದಿಸಿದಕ್ಕೆ ರಾಹುಲ್ ಗಾಂಧಿ ಅನರ್ಹಗೊಳಿಸಿದ್ದಾರೆ ಆದರೂ ಈ ಬಗ್ಗೆ ಪಾಠ ಕಲಿತಿಲ್ಲ ಈ ಬಗ್ಗೆ ಕ್ರಮ ವಹಿಸಬೇಕು ಎಂದು ದೂರು ಕೊಟ್ಟಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ