ಬಡ ಕಾರ್ಮಿಕರಿಗೆ ಕೊಳೆತ ತರಕಾರಿ ಕಿಟ್ ವಿತರಣೆ; ಮಾಜಿ ಸಚಿವರ ಬೆಂಬಲಿಗರ ವಿರುದ್ಧ ಗ್ರಾಮಸ್ಥರು ಆಕ್ರೋಶ

ಶುಕ್ರವಾರ, 1 ಮೇ 2020 (10:40 IST)
Normal 0 false false false EN-US X-NONE X-NONE

ಬೆಂಗಳೂರು : ಬಡ ಕಾರ್ಮಿಕರಿಗೆ ಕೊಳೆತ ತರಕಾರಿ ಕಿಟ್ ವಿತರಣೆ ಮಾಡಿದ ಹಿನ್ನಲೆಯಲ್ಲಿ ಮಾಜಿ ಸಚಿವ ಡಿ.ಸುಧಾಕರ್ ಬೆಂಬಲಿಗರ ವಿರುದ್ಧ ಗ್ರಾಮಸ್ಥರು ಆರೋಪ ಮಾಡಿದ್ದಾರೆ.

 

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹರಿಯಬೆ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ಮಾಜಿ ಸಚಿವ ಡಿ.ಸುಧಾಕರ್ ಬೆಂಬಲಿಗರು ಅಲ್ಲಿನ ಗ್ರಾಮಸ್ಥರಿಗೆ  ಮಾಜಿ ಸಚಿವರ ಭಾವಚಿತ್ರ ಹೆಸರು ಇರುವ ತರಕಾರಿ ಕಿಟ್ ನೀಡಿದ್ದಾರೆ. ಆದರೆ ಅದರಲ್ಲಿ  ಕೊಳೆತ ತರಕಾರಿ ಇರುವುದನ್ನು ಕಂಡು  ಗ್ರಾಮಸ್ಥರು ಮಾಜಿ ಸಚಿವರ ಬೆಂಬಲಿಗರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ