ಅಹಮ್ಮದ್ ಪಟೇಲ್ ಗೆಲ್ಲಿಸಿದ ಖುಷಿಯಲ್ಲಿದ್ದ ಡಿಕೆಶಿಗೆ ಶಾಕ್

ಬುಧವಾರ, 9 ಆಗಸ್ಟ್ 2017 (11:47 IST)
ಬೆಂಗಳೂರು:  ಗುಜರಾತ್ ಶಾಸಕರನ್ನು ರೆಸಾರ್ಟ್ ನಲ್ಲಿ ಸುರಕ್ಷಿತವಾಗಿ ಇಟ್ಟು, ಕೊನೆಗೆ ಗುಜರಾತ್ ನಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಆಪ್ತ ಅಹಮ್ಮದ್ ಪಟೇಲ್ ಗೆಲುವಿಗೆ ಕಾರಣರಾಗಿದ್ದ ಸಚಿವ ಡಿಕೆ ಶಿವಕುಮಾರ್ ಗೆ ಶಾಕ್ ಎದುರಾಗಿದೆ.

 
ವಿಚಾರಣೆಯ ಭಾಗವಾಗಿ ಐಟಿ ಇಲಾಖೆ ಡಿಕೆಶಿ ಮತ್ತು ಕುಟುಂಬದವರಿಗೆ ಸೇರಿದ 25 ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದೆ ಎಂದು ಖಾಸಗಿ  ವಾಹಿನಿ ವರದಿ ಮಾಡಿದೆ. ಮೊನ್ನೆಯಷ್ಟೇ ಐಟಿ ಇಲಾಖೆ ಅಧಿಕಾರಿಗಳು ಡಿಕೆಶಿ ಮತ್ತು ಅವರ ಆಪ್ತರ ನಿವಾಸದಲ್ಲಿ ನಾಲ್ಕು ದಿನಗಳ ಕಾಲ ಪರಿಶೀಲನೆ ನಡೆಸಿತ್ತು.

ಇದೀಗ ಬ್ಯಾಂಕ್ ವ್ಯವಹಾರಗಳ ತನಿಖೆ  ನಡೆಸಲು ಐಟಿ ಇಲಾಖೆ ಡಿಕೆ ಶಿವಕುಮಾರ್, ಪತ್ನಿ, ಮಕ್ಕಳು ಸೇರಿದಂತೆ ಕುಟುಂಬಸ್ಥರ ಸುಮಾರು 25 ಬ್ಯಾಂಕ್ ಖಾತೆಗಳನ್ನು ತಡೆಹಿಡಿದಿದೆ ಎಂದು ಖಾಸಗಿ ವಾಹಿನಿ ಹೇಳಿದೆ. ಉಳಿದ ಎರಡು ಖಾತೆಗಳ ಮಾಹಿತಿ ಪಡೆದು ನಂತರ ಸದ್ಯದ ಮಟ್ಟಿಗೆ ಬಳಕೆಗೆ ಅನುಮತಿ ನೀಡಲಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ.. ಬ್ರಾ ಗಾತ್ರಕ್ಕನುಗುಣವಾಗಿ ಇಲ್ಲಿ ಆಹಾರ ಕೊಡುತ್ತಾರೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ