ಡಿಕೆಶಿ ಮನೆಯಲ್ಲಿ ಐಟಿ ದಾಳಿ ಮುಕ್ತಾಯ, ಮಾಧ್ಯಮಗಳಿಗೆ ಡಿಕೆಶಿ ಹೇಳಿದ್ದಿಷ್ಟು

ಶನಿವಾರ, 5 ಆಗಸ್ಟ್ 2017 (10:33 IST)
ಕಳೆದ 4 ದಿನಗಳಿಂದ ಸಚಿವ ಡಿ.ಕೆ. ಶಿವಕುಮಾರ್ ಮನೆಯಲ್ಲಿ ನಡೆಯುತ್ತಿದ್ದ ಐಟಿ ದಾಳಿ ಮುಕ್ತಾಯವಾಗಿದೆ. ಮನೆಯಿಂದ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್, ನನ್ನ ಮನೆಯಲ್ಲಿ ಏನು ಸಿಕ್ಕಿದೆ. ನನ್ನ ದೆಹಲಿ ಮನೆಯಲ್ಲಿ ಏನು ಸಿಕ್ಕಿದೆ ಎಂಬುದನ್ನ ಪಂಚನಾಮೆ ಕೈಗೆ ಸಿಕ್ಕ ಬಳಿಕ ಎಲ್ಲವೂ ನಿಮ್ಮ ಮುಂದೆ ಇಡುತ್ತೇನೆ.  ನೀವೆಲ್ಲರೂ ಹಲವು ದಿನಗಳಿಂದ ನನಗಾಗಿ ಕಾದಿದ್ದೀರಿ. ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ.

ಹಲವು ದಿನಗಳಿಂದ ನನ್ನ ಮನೆ, ಸ್ನೇಹಿತರು, ಸಂಬಂಧಿಕರು ಮನೆ ಮೇಲೆ ದಾಳಿ ನಡೆದ ಬಗ್ಗೆ ಸುದ್ದಿಗಳನ್ನ ಬಿತ್ತರಿಸಿದ್ದೀರಿ.ಹಲವು ದಿನಗಳಿಂದ ನೀವು ನನ್ನ ಮನೆ ಮುಂದೆ ಕಾದಿದ್ದರಿಂದ ಮಾತನಾಡುತ್ತಿದ್ದೇನೆ. ಸಂವಿಧಾನ ಮತ್ತು ಕಾನೂನು ಬಿಟ್ಟು ನಡೆಯುವುದಿಲ್ಲ. ನನಗೆ ಬೆಂಬಲ ನೀಡಿದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಇದೇವೇಳೆ,  ನಾನು ನಂಬಿದ ದೇವರ ದರ್ಶನಕ್ಕೆ ಹೋಗುತ್ತಿದ್ದೇನೆ. ದರ್ಶನದ ಬಳಿಕ ನನ್ನನ್ನ ನಂಬಿ ಬಂದಿರುವ ಶಾಸಕರ ಭೇಟಿಗೆ ತೆರಳುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ  ನಾನು ಕಿವಿಯಲ್ಲಿ ಹೂ ಇಟ್ಟುಕೊಂಡು ಬೆಂಗಳೂರಿಗೆ ಬಂದಿಲ್ಲ ರಾಜಕೀಯ ಮಾಡಲೆಂದೇ ಬಂದಿದ್ದೇನೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ