ಅಳಿಯ-ಮಗಳ ಜಗಳ ಬಿಡಿಸಲು ಬಂದ ಮಾವನಿಗೆ ಆಗಿದ್ದೇನು ಗೊತ್ತಾ?

ಬುಧವಾರ, 12 ಫೆಬ್ರವರಿ 2020 (11:07 IST)
ಮೈಸೂರು : ಅಳಿಯ-ಮಗಳ ಜಗಳದ  ವೇಳೆ ಮಧ್ಯಪ್ರವೇಶಿದ ಮಾವನನ್ನು ಅಳಿಯ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮೈಸೂರಿನ ಗೌಸಿಯಾನಗರದ ಮನೆಯಲ್ಲಿ ನಡೆದಿದೆ.


ಪತಿ ನದೀಂ ಅಹ್ಮದ್ ಖಾನ್, ಪತ್ನಿ ಹಸೀನಾ ಮಧ್ಯ ಜಗಳ ನಡೆಯುತ್ತಿತ್ತು. ಜಗಳ ತಾರಕಕ್ಕೇರಿದಾಗ ಪತಿ ನದೀಂ ಹಸೀನಾಗೆ ಚಾಕು ಇರಿಯಲು ಯತ್ನಿಸಿದ. ಆ ವೇಳೆ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಮಾವ ಸಲೀಂನಿಗೆ ಅಳಿಯ ನದೀಂ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.


ಗಂಭೀರವಾಗಿ ಗಾಯಗೊಂಡ ಮಾವ ಸಲೀಂ ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನಪ್ಪಿದ್ದಾನೆ. ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ