ಸಂಸದ ಡಿಕೆ ಸುರೇಶ್ ಪ್ರಧಾನಿಗೆ ಕೊಟ್ಟ ಎಂಥದ್ದು ಗೊತ್ತಾ?

ಶನಿವಾರ, 19 ಜನವರಿ 2019 (19:40 IST)
ಬಿಜೆಪಿಯ ಸಂಸದ ಪ್ರತಾಪ್ ಸಿಂಹ ಹೊಸ ವರ್ಷಕ್ಕೆ ಸರ್ಕಾರ ಬೀಳುತ್ತದೆ. ಸಂಕ್ರಾಂತಿಗೆ ಬೀಳುತ್ತದೆ ಅಂತ ಹೇಳ್ತಾರೆ.
ಮುಂಬರುವ ಯುಗಾದಿಗೆ ಸರ್ಕಾರ ಉಳಿಯುತ್ತೋ ಉರುಳುತ್ತೋ ಗೊತ್ತಿಲ್ಲ. ಹೀಗಂತ ಅಂದಿರುವ ಸಂಸದ ಡಿಕೆ ಸುರೇಶ್, ಪ್ರಧಾನಿಗೂ ಟಾಂಗ್ ನೀಡಿದ್ದಾರೆ.

ಬನ್ನೇರುಘಟ್ಟ ಮಂಟಪ ಪಂಚಾಯತಿ ಕಾರ್ಯಕ್ರಮದಲ್ಲಿ ಸಂಸದ ಡಿಕೆ ಸುರೇಶ್ ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಮುಂದಿನ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎದುರಾಳಿ ಸ್ಪರ್ಧಿ ಆರ್. ಆಶೋಕ್ ಎಂದು ಯಾರೋ ಕರೆ ಮಾಡಿದ್ದರು. ನಾನು ನರೇಂದ್ರ ಮೋದಿ ಅವರಿಗೆ ವೈಟ್ ಮಾಡ್ತಾ ಇದ್ದೀನಿ. ಅವರೇ ಸ್ಪರ್ಧಿ ಆದರೆ ಒಳ್ಳೆದು ಎಂದು ಅಣಕ ಮಾಡಿದರು.

ನರೇಂದ್ರ ಮೋದಿಯವರ ಎದುರಾಳಿ ಆದ್ರೆ ಫೈಟ್ ಮಾಡೋದಕ್ಕೆ ಆಸಕ್ತಿ ಇದೆ ಅಂತ ಹೇಳಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಿದರೆ ಸರಿಯಾದ ವ್ಯಕ್ತಿಯ ಜೊತೆಯಲ್ಲಿಯೇ ಹೋರಾಟ ಮಾಡ್ಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ  ಬಿಜೆಪಿಯವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ ಸಂಸದ ಡಿಕೆ ಸುರೇಶ್.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ