ಸಚಿವ ಡಿಕೆಶಿ ತೆರಳಿದ್ದೆಲ್ಲಿಗೆ ಗೊತ್ತಾ?

ಭಾನುವಾರ, 9 ಸೆಪ್ಟಂಬರ್ 2018 (19:39 IST)
ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರಗೆ ಕೇಂದ್ರದ ಜಾರಿ ನಿರ್ದೇಶನಾಲಯದಿಂದ ಬಂಧನದ ಆತಂಕ ಎದುರಾಗಿದೆ.

ಜಲಸಂಪನ್ಮೂಲ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಅವರು ಅಜ್ಱಆತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಕೇಂದ್ರದ ಜಾರಿ ನಿರ್ದೇಶನಾಲಯವು ಸಚಿವರಾದ ಡಿ.ಕೆ.ಶಿ ಅವರ ವಿರುದ್ಧ ಐಸಿಐಆರ್ ದಾಖಲಿಸಿದೆ ಎಂಬ ಮಾಹಿತಿಗಳು ಹೊರಗೆ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಸಚಿವರು ಎಲ್ಲಿ ಇದ್ದಾರೆ ಎನ್ನುವ ವಿಷಯವೂ ಅವರ ಆಪ್ತರಿಗೆ ತಿಳಿದಿಲ್ಲ.

ಬೆಂಗಾವಲು ಪಡೆ ಬದಿಗಿರಿಸಿ ಅಜ್ಱಆತ ಸ್ಥಳಕ್ಕೆ ತೆರಳಿದ್ದಾರೆ. ಅಲ್ಲದೇ ಸರಕಾರಿ ಕಾರನ್ನೂ ಸಚಿವ ಡಿ.ಕೆ.ಶಿವಕುಮಾರ ಬದಿಗಿರಿಸಿ ಹೋಗಿದ್ದಾರೆ.

ಮತ್ತೊಂದೆಡೆ, ಸಚಿವ ಡಿ.ಕೆ.ಶಿವಕುಮಾರ ಕಾನೂನು ಪಂಡಿತರ ಜತೆ ಚರ್ಚೆಗೆ ತೆರಳಿದ್ದಾರೆ ಎನ್ನಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ