ಕೊರೊನಾ ಕಪ್ ಗೆದ್ದ ಜಿಲ್ಲೆ ಯಾವುದು ಗೊತ್ತಾ?
ಕೊರೊನಾ ವೈರಸ್ ತಡೆ ವಿಷಯದಲ್ಲಿ ದೇಶಕ್ಕೆ ಕೇರಳ ಮಾದರಿಯಾಗಿದ್ದರೆ, ರಾಜ್ಯಕ್ಕೆ ಈ ಜಿಲ್ಲೆ ಮಾದರಿಯಾಗಿದೆ.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಅಧಿಕಾರಿಗಳ ಶ್ರಮ, ಜನರ ಸಹಕಾರದಿಂದ ಚಾಮರಾಜನಗರ ಜಿಲ್ಲೆ ಈಗಲೂ ಗ್ರೀನ್ ಝೋನ್ ನಲ್ಲಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಚಾಮರಾಜನಗರ-ರಾಮನಗರ ಬಗ್ಗೆ ಕಮೆಂಟ್ ಗಳು ಶುರುವಾಗಿದ್ದವು. ಇದೀಗ ರಾಮನಗರದಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆ ಇತ್ತ ಚಾಮರಾಜನಗರ ಜಿಲ್ಲೆಯ ಜನರು ತಮ್ಮ ಜಿಲ್ಲೆಯ ಮುಡಿಗೆ ಕೊರೊನಾ ಕಪ್ ಬಂದಿದೆ ಎಂದು ಚರ್ಚೆ ಶುರುಮಾಡುತ್ತಿದ್ದಾರೆ.