ಸಿ.ಪಿ.ಯೋಗೇಶ್ವರ್ ಮೇಲೆ ಮುತ್ತಿಗೆ ಹಾಕಲು ಯುವ ಜನತಾ ದಳದ ಕಾರ್ಯಕರ್ತರು ಯತ್ನಿಸಿದ್ದೇಕೆ ಗೊತ್ತಾ?

ಭಾನುವಾರ, 28 ಫೆಬ್ರವರಿ 2021 (11:53 IST)
ಬೆಂಗಳೂರು : ಸಚಿವ ಸಿ.ಪಿ.ಯೋಗೇಶ್ವರ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಯುವ ಜನತಾ ದಳದ ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಸಚಿವ ಸಿ.ಪಿ.ಯೋಗೇಶ್ವರ್ ಮೇಲೆ ಮುತ್ತಿಗೆ ಹಾಕಲು ಕಾರ್ಯಕರ್ತರು ಯತ್ನ ನಡೆಸಿದ್ದಾರೆ. ಸಚಿವ ಸಿ.ಪಿ.ಯೋಗೇಶ್ವರ್ ಇದ್ದ ಹೋಟೆಲ್ ಬಳಿ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.  ಧರಣಿ ಮಾಹಿತಿ ತಿಳಿದ ಸಚಿವ ಸಿ.ಪಿ.ಯೋಗೇಶ್ವರ್ ಸರ್ಕ್ಯೂಟ್ ಹೌಸ್ ಗೆ ತೆರಳಿದ್ದರು. ಬಳಿಕ ಹೋಟೆಲ್ ಗೆ ವಾಪಸಾಗದೆ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಹಾಗಾಗಿ ಹೆದರಿ ಓಡಿದ್ರು ಎಂದು ಧರಣಿ ನಿರತರು ಘೋಷಣೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ