‘ಗುಟುಕ ಜೀವ ಹಿಡಿದಿರೋ ದೋಸ್ತಿ ಸರಕಾರ’

ಮಂಗಳವಾರ, 9 ಜುಲೈ 2019 (16:02 IST)
ರಾಜ್ಯದ ರಾಜಕೀಯ ಮಹತ್ವದ ಬದಲಾವಣೆ ಹಾಗೂ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಏತನ್ಮಧ್ಯೆ ದೋಸ್ತಿ ಸರಕಾರ ಮುಂದುವರಿಯುವ ಲಕ್ಷಣಗಳು ಬಂಡಾಯಗಾರರ ಖಡಕ್ ನಿರ್ಧಾರದಿಂದಾಗಿ ಕ್ಷೀಣಿಸತೊಡಗಿವೆ.

ಈಗಾಗಲೇ 14 ಶಾಸಕರು ರಾಜೀನಾಮೆ ನೀಡಿರೋ ಬೆನ್ನಲ್ಲೇ ಕಾಂಗ್ರೆಸ್ ನಾಯಕರ ವಿರುದ್ಧ ಸಮರ ಸಾರಿದ್ದ ಶಿವಾಜಿನಗರ ಶಾಸಕ ರೋಷನ್ ಬೇಗ್ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ದೋಸ್ತಿಗಳ ಆಡಳಿತ ಅಂಚಿಗೆ ಬಂದಂತಾಗಿದೆ.

ಇನ್ನೂ ಐದು ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದು ನಿಜವಾದರೆ ಮುಖ್ಯಮಂತ್ರಿ ಸ್ಥಾನದಿಂದ ಹೆಚ್.ಡಿ.ಕುಮಾರಸ್ವಾಮಿ ನಿರ್ಗಮಿಸದೇ ಬೇರೆ ದಾರಿಯಿಲ್ಲ.

ಕಾಂಗ್ರೆಸ್ ನಾಯಕರು ವಿಧಾನ ಸೌಧದಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ