ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯಕ್ಕೆ ಬರ ಬಂದಿದೆ- ಸಿ.ಟಿ‌ ರವಿ

ಗುರುವಾರ, 20 ಜುಲೈ 2023 (17:07 IST)
ಐಎಎಸ್ ಅಧಿಕಾರಿಗಳನ್ನ ಈ ರೀತಿ ಡ್ಯುಟಿ ಹಾಕೋದಕ್ಕೆ ಯಾರಿಗೂ ಅಧಿಕಾರ ಇಲ್ಲ.ಡಿಪಿಆರ್ ಉಲ್ಲಂಘನೆ ಯಾಗಿದೆ.ಬಿಜೆಪಿ ಸರ್ಕಾರ ಇದ್ದಾಗ ಮಳೆಯೋ ಮಳೆ.ಈಗ ಕಾಂಗ್ರೆಸ್ ಸರ್ಕಾರ ಬಂದಿದೆ ಬರವೋ ಬರ.ಕಾಂಗ್ರೆಸ್ ಗೆ ಇದು ಶಾಪ.ರೈತರ ಆತ್ಮಹತ್ಯೆ ಸಂಬಂಧಿಸಿದಂತೆ ಗಮನ ಸೆಳೆಯುವ ಕೆಲಸವನ್ನ ಮಾಡ್ತಿವಿ ಎಂದು ಸಿಟಿ ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
 
ಎರಡೂ ಪಕ್ಷದ ಶಾಸಕರು ನಿನ್ನೆ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದೇವೆ.ರಾಜ್ಯಪಾಲರಿಗೆ ದೂರು ನೀಡಲಾಗಿದೆ.ಐಎಎಸ್ ಅಧಿಕಾರಿಗಳನ್ನು ಸರ್ಕಾರ ಬಳಸಿಕೊಂಡ ರೀತಿಯ ಬಗ್ಗೆಯೂ ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ.ವರದಿ ತರಿಸಿಕೊಂಡು ಕ್ರಮಕ್ಕೆ ಮುಂದಾಗುವುದಾಗಿ ರಾಜ್ಯಪಾಲರು ಹೇಳಿದ್ದಾರೆ ಎಂದು ಸಿ ಟಿ ರವಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ