ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ನೌಕರನ್ನು ಕೆರಸಿ ಹಲ್ಲೆ

ಮಂಗಳವಾರ, 21 ಫೆಬ್ರವರಿ 2023 (20:39 IST)
ಕೇಂದ್ರ ಮಾದರಿ ವೇತನ ಮತ್ತು ರಾಜ್ಯ ಮಾದರಿ ವೇತನವನ್ನ ಕೊಡಿಸುತ್ತೇ ಎಂದು ಸರ್ಕಾರಿ ನೌಕರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜಾಧ್ಯಕ್ಷರು ಹೇಳಿಕೆಗಳನ್ನ ಕೊಟ್ಟು ಈಗ ಅವಮಾನಕ್ಕೀಡಾಗಿದ್ದಾರೆ. ಇದೇ ವಿಚಾರವಾಗಿ ಇಂದು ಸಭೆ ಕರೆದಿದ್ದು ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ನೌಕರನ್ನು ಕೆರಸಿ ಹಲ್ಲೆ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶಾಂತಕುಮಾರ್ ರಾಜ್ ನ್ಯೂಸ್ ಜೊತೆ ಮಾತನಾಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜಾಧ್ಯಕ್ಷರು ಪ್ರೇರಿತ ಗಲಾಟೆಯನ್ನು ನಡೆಸಿದ್ದಾರೆ. ರಾಜ್ಯಾದ್ಯಂತ ಹೋರಾಟ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಸಭೆ ಕೆರದು ತಮಗೆ ಇಚ್ಚೆ ಬಂದ ರೀತಿ ವರ್ತಿಸಿದ್ದಾರೆ. ಸರ್ಕಾರಿ ನೌಕರರನ್ನು ಅವಕಾಶ ಸಿಕ್ಕಾಗ ಮಾತ್ರ ಬಳಸಿಕೊಳ್ಳುವ ಕೆಲಸಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜಾಧ್ಯಕ್ಷರು ಕೈ ಹಾಕಿದ್ದಾರೆ. ನಮ್ಮ ನಿಲುವು ಸರ್ಕಾರಿ ನೌಕರಿಗೆ ನ್ಯಾಯ ಸಿಗಬೇಕು ಎಂಬ ಕಾರಣಕ್ಕೆ ಧರಣಿ ಕೂಡ ನಡೆಸಿದ್ದವು ಆದರೆ ಸರ್ಕಾರ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಮನವಿಗೆ ಸ್ಪಂದಿಸದೇ ಸುಮ್ಮನಾಗಿದೆ ಎಂದು ಆಗ್ರಹಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ