ಯಮಲೂರು ಕೆರೆ ಒತ್ತುವರಿ ಮಾಡಿ ಐಶರಮಿ ಕಟ್ಟಡ ನಿರ್ಮಾಣ..!

ಮಂಗಳವಾರ, 6 ಸೆಪ್ಟಂಬರ್ 2022 (20:40 IST)
ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಯಮಲೂರು ಭಾಗಶಃ ಮುಳುಗಡೆಯಾಗಿದೆ.ಹೀಗಾಗಿ ಯಮಲೂರು ಕೆರೆ ಒತ್ತುವರಿ ಮಾಡಿ ಐಶಾರಾಮಿ ಕಟ್ಟಡ ನಿರ್ಮಾಣ ಮಾಡಲಾಗಿದೆ.ಈಗ ತಡವಾಗಿ ಎಚ್ಚೇತ್ತ ಬಿಬಿಎಂಪಿ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಮೊದಲ ಹೆಜ್ಜೆ ಇಟ್ಟಿದ್ದಾರೆ.
 
ಯಮಲೂರಿನ ದಿವ್ಯ ಶ್ರೀ ಟೆಕ್ ಪಾರ್ಕ್ ನೆಲಸಮ ಮಾಡುವ ಪ್ಲಾನ್ ನಡೆಯುತ್ತಿದೆ.ದಿವ್ಯ ಶ್ರೀ ಟೆಕ್ ಪಾರ್ಕ್ ನ ನೆಲಸಮ ಮಾಡಕ್ಕೆ ಅಧಿಕಾರಿಗಳು ಈಗಾಗಲೇ ಮುಂದಾಗಿದ್ದು,ಯಮಲೂರು ಕೆರೆ ಒತ್ತುವರಿ ಮಾಡಿ ಐಶರಮಿ ಕಟ್ಟಡ ನಿರ್ಮಾಣಮಾಡಿದ್ದಾರೆ.ಇನ್ನು ಮಳೆ ನೀರಿನಲ್ಲಿ  ಕಾರು ಬೈಕು ತೇಲ್ತಾ ಇದೆ. ರಣಚಂಡಿ ಮಳೆಗೆ ಓಲ್ಡ್ ಏರ್ಪೋರ್ಟ್ ರೋಡ್  ತತ್ತರಿಸಿ ಹೋಗಿದೆ.ಬಾಗಶಃ ಮುಳುಗಡೆಯಾದ್ರು ಅಧಿಕಾರಿಗಳು ಮಾತ್ರ ಇತ್ತ  ಗಮನ ಹರಿಸ್ತಾ ಇಲ್ಲ.ಹೀಗಾಗಿ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.ಜೊತೆಗೆ ಜನರನ್ನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಟ್ಯಾಕ್ಟರ್ ನಲ್ಲಿ ರವಾನಿಸ್ತಾ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ