ಅಧಿವೇಶನದ ಮೊದಲ ದಿನವೇ ರೈತರ ಕಿಚ್ಚು

ಸೋಮವಾರ, 12 ಸೆಪ್ಟಂಬರ್ 2022 (21:16 IST)
ಸಿಲಿಕಾನ್ ಸಿಟಿಯಲ್ಲಿ ರೈತರು  ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಧರಣಿ ನಡೆಸ್ತಿದ್ದಾರೆ.ಇಂದು ರಾಜಧಾನಿಯ ಫ್ರೀಡಂ ಪಾರ್ಕ್ ನಲ್ಲಿ  ರೈತರ ರಣಕಹಳೆ ಜೋರಾಗಿದೆ.ಅಷ್ಟೇ ಅಲ್ಲದೆ ವಿವಿಧ ಬೇಡಿಕೆಗಳ ಈಡೇರಿಕೆಗೆ  ಆಗ್ರಹಿಸಿ ರೈತರು ವಿಧಾನಸೌಧ ಮುತ್ತಿಗೆ ಹಾಕಲು ನಿರ್ಧಾರ ಮಾಡಿಕೊಂಡಿದ್ದಾರೆ
 
ವಿವಿಧ ರೈತ ಪರ ಸಂಘಟನೆಗಳಿಂದ ಅಧಿವೇಶನಕ್ಕೆ ಮುತ್ತಿಗೆ ಪ್ಲಾನ್ ನಡೆಯುತ್ತಿದ್ದು,ಬೇರೆ ಬೇರೆ ಜಿಲ್ಲೆಗಳಿಂದ ರೈತರು ಬೆಂಗಳೂರಿಗೆ ಆಗಮಿಸುತ್ತಿದ್ದು,ರಾಜ್ಯದಲ್ಲಿ ಕೃಷಿ ಮಸೂದೆಗಳ ವಾಪಸ್ಸು ಹಾಗೂ ರೈತರ ಬೆಳೆ ನಷ್ಟಕ್ಕೆ ಪರಿಹಾರ ಒದಗಿಸುವಂತೆ ರೈತರು ಹೋರಾಟ ಮಾಡ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ