ಸಿಮ್ ಬೇಕು ಎಂದಿದ್ದಕ್ಕೆ ಮಗಳನ್ನೇ ಕೊಂದ ತಂದೆ

ಶುಕ್ರವಾರ, 1 ಫೆಬ್ರವರಿ 2019 (06:05 IST)
ದಾವಣಗೆರೆ : ಸಿಮ್ ಬೇಕು ಎಂದು ಕೇಳಿದ್ದಕ್ಕೆ ಅನುಮಾನಗೊಂಡ ತಂದೆ ಮಗಳನ್ನೇ ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.


ಅನಿತಾ ಕೊಲೆಯಾದ ಯುವತಿ, ಕಲ್ಲೇಶಪ್ಪ ಮಗಳನ್ನೇ ಕೊಂದ ತಂದೆ. ಅನಿತಾ ಫೋನಿನಲ್ಲಿ ಮಾತನಾಡಲು ಸಿಮ್ ಬೇಕು ಎಂದು ತನ್ನ ತಂದೆಯ ಬಳಿ ಕೇಳಿದ್ದಾಳೆ. ಇದಕ್ಕೆ ತಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಅವರಿಬ್ಬರ ನಡುವೆ ಜಗಳ ನಡೆದಿದೆ. ಕೊನೆಗೆ ತಂದೆ ಸಿಮ್ ಕೊಡಿಸುವುದಾಗಿ ಹೇಳಿ ಮಗಳನ್ನು ಕರೆದುಕೊಂಡು ಹೋಗಿ ಅಡಕೆ ಹೊಲದಲ್ಲಿ ವೇಲ್ ​ನಿಂದ‌ ಅನಿತಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.


ಆದರೆ ಅನಿತಾ ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದು, ಇದು ಆಕೆಯ ತಂದೆಯ ವಿರೋಧವಿತ್ತು ಎನ್ನಲಾಗಿದೆ. ಆದರೆ ಇದೀಗ ಮಗಳು ತನ್ನ ಪ್ರಿಯಕರನ ಜೊತೆ ಮಾತನಾಡುವುದಕ್ಕೆ ಸಿಮ್ ಕೇಳಿದ್ದಾಳೆ ಎಂದು ಭಾವಿಸಿ ಆತ ಮಗಳನ್ನು ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.


ಇನ್ನೂ ಕೊಲೆಯಾದ ಅನಿತಾಳ ಚಿಕ್ಕಪ್ಪನೇ ಜಗಳೂರು ಪೊಲೀಸ್ ಠಾಣೆಯಲ್ಲಿ‌ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ