ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ

ಗುರುವಾರ, 10 ನವೆಂಬರ್ 2022 (17:53 IST)
ಕಾಂಗ್ರೆಸ್‌ನ ವಿಜಯ ಸಂಕಲ್ಪ ಶಿಬಿರ ಕಾರ್ಯಾಗಾರದಲ್ಲಿ ಎರಡು ಬಣಗಳ ನಡುವೆ ಮಾರಾ ಮಾರಿ ನಡೆದಿದೆ.ಇಬ್ಬರು ಮಹಿಳಾ ಕಾರ್ಯಕರ್ತರು ಸೇರಿ ಐದಾರು ಮಂದಿಗೆ ತೀವ್ರ ಗಾಯವಾಗಿದೆ.ಗಾಯವಾದ ಕಾಂಗ್ರೆಸ್ ಕಾರ್ಯಕರ್ತರ ಘಟನೆ ಸ್ಥಳೀಯವಾಗಿ ದಾಖಲಾಗಿದೆ.ಈ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಪೀಣ್ಯದಲ್ಲಿ ನಡೆದಿದೆ.
 
ಎನ್ಟಿಟಿಎಫ್ ಜಿಮ್ಖಾನ ಕ್ಲಬ್‌ನಲ್ಲಿ ವಿಜಯ ಸಂಕಲ್ಪ ಕಾರ್ಯಾಗಾರ ನಡೆದಿದೆ.ದಾಸರಹಳ್ಳಿ ಕಾಂಗ್ರೆಸ್ ಉಸ್ತುವಾರಿ ಡಾ.ನಾಗಲಕ್ಷ್ಮಿ ನೇತೃತ್ವದ ಯೋಜನೆ ಮಾಡಿದ್ದು,ವಿವಿಧ ಜಿಲ್ಲೆಗಳ ಸುಮಾರು 40 ಪ್ರತಿನಿಧಿಗಳು ಭಾಗವಹಿಸಿದ್ದರು.ಕೆಪಿಸಿ ಸದಸ್ಯ ಪಿ. ಎನ್. ಕೃಷ್ಣಮೂರ್ತಿ ಬೆಂಬಲಿಗರಾದ 20 ಮಂದಿ ಸಭೆಯಲ್ಲಿ ಗಲಾಟೆ ಮಾಡಿದ್ದಾರೆ.ಕೃಷ್ಣಮೂರ್ತಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ಗಲಾಟೆ ಮಾಡಿದ್ದಾರೆ, ಆ ಗಲಾಟೆ ತರಕಕ್ಕೆ ತಿರುಗಿದೆ.ಕಾರ್ಯಕ್ರಮಕ್ಕೆ ಹಿಂದಿನ ಚುನಾವಣೆ ಅಭ್ಯರ್ಥಿಗಳಿಗೆ ಕರೆದಿಲ್ಲ ಎಂದು ಗಲಾಟೆ ಮಾಡಿಕೊಂಡ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ನಾಗಲಕ್ಷ್ಮಿ ಹಾಗೂ ಕೃಷ್ಣಮೂರ್ತಿ ನಡುವೆ ಮಾರಾಮಾರಿ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ