ಪಟಾಕಿ ತಂದ ಅವಘಡ: ಬೆಂಗಳೂರಿನಲ್ಲಿ 11 ಮಂದಿಗೆ ಗಾಯ

ಗುರುವಾರ, 19 ಅಕ್ಟೋಬರ್ 2017 (13:39 IST)
ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ವೇಳೆ ಪಟಾಕಿ ಅವಘಡ ಸಂಭವಿಸಿದ್ದು, ಇಬ್ಬರು ಯುವಕರು ಸೇರಿದಂತೆ 11 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
         ಸಾಂದರ್ಭಿಕ ಚಿತ್ರ
ನಾರಾಯಣ ನೇತ್ರಾಲಯದಲ್ಲಿ  6 ಮಕ್ಕಳು ಸೇರಿದಂತೆ ಇಬ್ಬರು ಯುವಕರು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮಿಂಟೋ ಆಸ್ಪತ್ರೆಗೆ 3 ಜನ ಮಕ್ಕಳು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಪೈಕಿ ಹೆಚ್ಚಿನವರಿಗೆ ಕಣ್ಣಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಆಡುಗೋಡಿಯಲ್ಲಿ ಶಾರುಖ್‌ ಎಂಬ ಯುವಕ ಯಾರೋ ಹಚ್ಚಿದ ರಾಕೆಟ್‌ ತಗುಲಿ ತನ್ನ ಎಡಗಣ್ಣನ್ನು ಕಳೆದುಕೊಂಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ