ಕಬ್ಬಿಗೆ ಬಿದ್ದ ಬೆಂಕಿ: ಲಕ್ಷಾಂತರ ರೂ. ಬೆಳೆ ಭಸ್ಮ

ಗುರುವಾರ, 3 ಜನವರಿ 2019 (18:46 IST)
ನಾಲ್ಕು ಎಕರೆ ಜಮೀನಿನಲ್ಲಿನ ಕಬ್ಬಿಗೆ ಬಿದ್ದ ಬೆಂಕಿಯಿಂದ ಕಬ್ಬು ಬೆಳೆಗಾರ ಕಂಗೆಟ್ಟಿದ್ದಾನೆ.

ಆಕಸ್ಮಿಕವಾಗಿ ಕಬ್ಬಿಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.  ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕು ಕಬ್ಬೂರು ತಾಂಡಾದಲ್ಲಿ ಈ ಅವಘಡ ನಡೆದಿದೆ.

ಪರಸಪ್ಪ ಭಜಂತ್ರಿ ಎಂಬ ರೈತರಿಗೆ ಸೇರಿದ ನಾಲ್ಕು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ಕಬ್ಬು ಕಟಾವು ಮಾಡುವ ಮುನ್ನವೇ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಕಷ್ಟಪಟ್ಟು ಬೆಳೆ ಬೆಳೆದಿದ್ದ ರೈತ ಈಗ ಕಂಗಾಲಾಗಿದ್ದಾನೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ