"ವೀರ ಮದಕರಿ ನಾಯಕ" ಚಿತ್ರಕ್ಕೆ ವೇದಿಕೆ ಆಯ್ತಾ ಶರಣ ಸಂಸ್ಕೃತಿ ಉತ್ಸವ..?

ಶನಿವಾರ, 13 ಅಕ್ಟೋಬರ್ 2018 (14:19 IST)
"ವೀರ ಮದಕರಿ ನಾಯಕ" ಚಿತ್ರಕ್ಕೆ ವೇದಿಕೆ ಆಯ್ತಾ ಶರಣ ಸಂಸ್ಕೃತಿ ಉತ್ಸವ..? ಹೀಗೊಂದು ಪ್ರಶ್ನೆ ಕೇಳಿಬರಲಾರಂಭಿಸಿದೆ.
ಒಂದೇ ವೇದಿಕೆಯಲ್ಲಿ "ರಾಜಾ ವೀರ ಮದಕರಿ ನಾಯಕ" ಚಿತ್ರದ ಪ್ರಮುಖರು ಕಾಣಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬಾರಿ ವಿವಾದಕ್ಕೆ ಕಾರಣವಾಗಿರುವ "ವೀರ ಮದಕರಿ ನಾಯಕ" ಚಿತ್ರವಾಗಿದೆ.

ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಕುತೂಹಲ ಕೆರಳಿಸಿದೆ. ತೀವ್ರ ಕುತೂಹಲಕ್ಕೆ ಕಾರಣವಾದ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮದ ಬಗ್ಗೆ ಚರ್ಚೆಗಳು ಶುರುವಾಗಿವೆ.

ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆಯುತ್ತಿರುವ "ಸೌಹಾರ್ದ ನಡಿಗೆ ಶರಣ ಸಂಸ್ಕ್ರತಿ ಕಡೆಗೆ" ಕಾರ್ಯಕ್ರಮದಲ್ಲಿ ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ರಾಜೇಂದ್ರಸಿಂಗ್ ಬಾಬು, ಕಾದಂಬರಿಕಾರ ಬಿ.ಎಲ್ ವೇಣು, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ದೊಡ್ಡಣ್ಣ ಕಾಣಿಸಿಕೊಂಡಿದ್ದಾರೆ.

ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ಮೆಚ್ಚಿನ ನಟರನ್ನು ಕಂಡು ಅಭಿಮಾನಿಗಳು ಕೇಕೆ, ಶಿಳ್ಳೆ ಹಾಕಿದರು. 



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ