ರಾಜಕೀಯ ಪಕ್ಷಗಳು ನೀತಿಗೆಟ್ಟಿವೆ ಎಂದ ಮಾಜಿ ಸಚಿವ

ಸೋಮವಾರ, 24 ಸೆಪ್ಟಂಬರ್ 2018 (17:53 IST)
ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ನೀತಿಗೆಟ್ಟಿವೆ. ರಾಜ್ಯದಲ್ಲಿ ನೀತಿಗೆಟ್ಟ ರಾಜಕಾರಣ ಮಾಡಿ ಸಮಾಜ ಹಾಳು ಮಾಡುತ್ತಿವೆ ಅಂತಾ ಮಾಜಿ ಸಚಿವ ಸೊಗಡು ಶಿವಣ್ಣ ಸ್ವ ಪಕ್ಷೀಯ ವಿರುದ್ಧವೇ ಗುಡುಗಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸೊಗಡು ಶಿವಣ್ಣ, ಕಾಂಗ್ರೆಸ್ -ಜೆಡಿಎಸ್ ಹಾಗೂ ವಿರೋಧ ಪಕ್ಷ ಬಿಜೆಪಿ ಈ ಮೂರು ಕೂಟದ ಸರ್ಕಾರವನ್ನ ರಾಜ್ಯಪಾಲರು ವಜಾಗೊಳಿಸಬೇಕು. ರಾಷ್ಟ್ರಪತಿ ಆಡಳಿತ ಹೇರಲು ವಿನಂತಿ ಮಾಡ್ತೀನಿ ಅಂದ್ರು.

ದೇಶ ಹಾಗೂ ರಾಜ್ಯಕ್ಕೆ ಯಾವುದೇ ತ್ಯಾಗ ಬಲಿದಾನ ಇಲ್ಲದೆ ಇದ್ದವರು ಇಂದು ಅಧಿಕಾರಕ್ಕಾಗಿ ಹೊಡೆದಾಟ ಮಾಡಿಕೊಳ್ತಾ ಇದ್ದಾರೆ. ಮಾಜಿ ಪ್ರದಾನಿ ದೇವೇಗೌಡರು ತ್ಯಾಗ ಬಲಿದಾನ ಮಾಡಿದ್ದಾರೆ. ಅವರ ಬಗ್ಗೆ ನಾನೂ ಏನೂ ಹೇಳುವುದಿಲ್ಲಾ ಅಂತಾ ದೇವೇಗೌಡ ಪರ  ಬ್ಯಾಟಿಂಗ್ ಮಾಡಿದ್ರು. ಅಪರೇಷನ್ ಕಮಲಕ್ಕೆ ನಾನು ವಿರೋಧಿ, ಅದು ನೀತಿಗೆಟ್ಟ ರಾಜಕಾರಣ. ಹಾಗಿದ್ದರೆ ಅಟಲ್ ಜೀ ಒಂದು ಮತದಿಂದ ಸೋಲುತಿರಲಿಲ್ಲಾ. ಅವರೂ ಎಂದೂ ನೀತಿಗೆಟ್ಟ ರಾಜಕಾರಣ ಮಾಡಲಿಲ್ಲಾ. ನಾನು ಪಕ್ಷದ ವಿರೋಧೀ ಹೇಳಿಕೆ ಕೊಟ್ಟಿದ್ದೇನೆ ಅಂತಾ ಯಾರ ಕೆಂಗಣಿಗೂ ಹೆದರಲ್ಲಾ. ನನ್ನ ಶೂಟ್ ಮಾಡಿದ್ರೂ ಗುಂಡಿಗೆ ಎದೆ ಕೊಡ್ತೀನಿ. ಬೆನ್ನು ಮಾಡಿ ಹೆದರಿ ಓಡುವುದಿಲ್ಲಾ ಅಂತಾ ಮಾರ್ಮಿಕವಾಗಿ ನುಡಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ