ಮಾಜಿ ಶಾಸಕ ಎಂಟಿ ಕೃಷ್ಣಪ್ಪಗೆ ಹುಚ್ಚುನಾಯಿ ಕಚ್ಚಿರಬೇಕು; ಎಸ್.ಆರ್.ಶ್ರೀನಿವಾಸ್ ಆಕ್ರೋಶ

ಭಾನುವಾರ, 3 ಜನವರಿ 2021 (11:08 IST)
ತುಮಕೂರು : ತನ್ನ ಸೋಲಿಗೆ ಎಸ್.ಆರ್. ಶ್ರೀನಿವಾಸ್ ಕಾರಣವೆಂಬ ಮಾಜಿ ಶಾಸಕ ಎಂಟಿ ಕೃಷ್ಣಪ್ಪ ಹೇಳಿಕೆಗೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್  ತಿರುಗೇಟು ನೀಡಿದ್ದಾರೆ.

ಮಾಜಿ ಶಾಸಕ ಎಂಟಿ ಕೃಷ್ಣಪ್ಪ ಗೆ ಹುಚ್ಚುನಾಯಿ ಕಚ್ಚಿರಬೇಕು. ಅವರು ಚೆನ್ನಾಗಿದ್ದರೆ ಈ ರೀತಿಯಾಗಿ ಮಾತನಾಡುತ್ತಿರಲಿಲ್ಲ ಎಂದು ಸ್ವಪಕ್ಷದವರ ವಿರುದ್ಧ  ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಮತಿಭ್ರಮಣೆಯಿಂದ ಹೇಳಿಕೆ ನೀಡುವುದು ಸರಿಯಲ್ಲ. ಪಕ್ಷದ ದೊಡ್ಡವರ ಮಾತುಗಳನ್ನು ನಾನು ಗಮನಿಸುತ್ತಿದ್ದೇನೆ. ವಾಸ್ತವ ಅರಿಯದೆ ಯಾರೋ ಹೇಳಿದ ಮಾತು ಕೇಳಿದ್ದಾರೆ. ತಾನೇ ಸರ್ವಜ್ಞ, ತಾನೇ ಎಲ್ಲಾ ಅನ್ನುವಂತೆ ಮಾತನಾಡ್ತಿದ್ದಾರೆ ಎಂದು ಅವರು  ಮಾಜಿ ಶಾಸಕ ಎಂಟಿ ಕೃಷ್ಣಪ್ಪ ವಿರುದ್ಧ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ