ಕಾವೇರಿ ನದಿಯಲ್ಲಿ ಈಜಾಡಲು ತೆರಳಿದ್ದ ತಂದೆ- ಮಗ ಸೇರಿ ನಾಲ್ವರು ದುರ್ಮರಣ

Sampriya

ಮಂಗಳವಾರ, 26 ಮಾರ್ಚ್ 2024 (17:07 IST)
ಮೈಸೂರು: ಮಳವಳ್ಳಿ ತಾಲ್ಲೂಕು ಮುತ್ತತ್ತಿ ಅರಣ್ಯ ಪ್ರದೇಶದ ಕಾವೇರಿ ನದಿಯಲ್ಲಿ ಈಜಾಡಲು ತೆರಳಿದ್ದ ತಂದೆ ಮಗ ಸೇರಿ ನಾಲ್ವರು ನೀರಿನ ಮಡುವಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ನಡೆದಿದೆ.

ಮೃತರನ್ನು ಗುಂಡೂರಾವ್ ನಗರ ನಿವಾಸಿಗಳಾದ ನಾಗೇಶ್ (45), ಅವರ ಪುತ್ರ ಭರತ್ (17), ಮಹಾದೇವ (14), ಗುರು (32) ಎಂದು ಗುರುತಿಸಲಾಗಿದೆ.

ಮೈಸೂರಿನ ಕನಕನಗರ ನಿವಾಸಿಗಳಾದ ಭಾಗ್ಯಮ್ಮ ಹಾಗೂ ರಾಜು ದಂಪತಿ ಮುತ್ತತ್ತಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಆಯೋಜಿಸಿದ್ದರು. ಈ ಹಿನ್ನೆಲೆ 50 ಮಂದಿ ಮುತ್ತತ್ತಿಗೆ ಬಂದಿದ್ದರು.

ಬೆಳಗ್ಗಿನ  ತಿಂಡಿ ನಂತರ ಹಲವಾರ ಈಜಾಡಲು ಕಾವೇರಿ ನದಿಗೆ ಇಳಿದಿದ್ದರು.

ಈಜಾಡುವ ಸಂದರ್ಭದಲ್ಲಿ ಮಹಾದೇವ ಮಡುವಿನಲ್ಲಿ ಮುಳುಗಿದರು. ಆತನನ್ನು ರಕ್ಷಿಸಲು ತಂದೆ ನಾಗೇಶ್‌ ಹೋಗಿದ್ದಾರೆ. ಅವರು ಮಡುವಿನಲ್ಲಿ ಸಿಲುಕಿದ್ದು ಇವರಿಬ್ಬರ ರಕ್ಷಣೆಗೆ ಭರತ್‌, ಗುರು ಹೋಗಿದ್ದಾರೆ. ನಾಲ್ವರು ಮಡುವಿನಿಂದ ಹೊರಬರಲಾಗದೇ ಜಲಸಮಾಧಿಯಾದರು.

ಹಲಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ