ಮತ್ತೆ ಈ ಬಾರಿ ಅದ್ಧೂರಿ ಗಣೇಶೋತ್ಸವಕ್ಕೆ ತಯಾರಿ ಶುರು

ಬುಧವಾರ, 24 ಆಗಸ್ಟ್ 2022 (08:10 IST)
ಬೆಂಗಳೂರು: ಕೊರೋನಾದಿಂದಾಗಿ ಕಳೆದ ಎರಡು ವರ್ಷ ಗಣೇಶ ಹಬ್ಬದ ಸಂಭ್ರಮಕ್ಕೆ ಮಂಕು ಬಡಿದಿತ್ತು.

ಕೊರೋನಾದಿಂದಾಗಿ ನಿರ್ಬಂಧದ ನಡುವೆ ಜನರನ್ನು ಸೇರಿಸಲಾಗದೇ ಗಣೇಶ ಹಬ್ಬ ಆಚರಿಸಲಾಗಿತ್ತು. ಆದರೆ ಈ ವರ್ಷ ನಿರ್ಬಂಧಗಳಿಲ್ಲದೇ ಮತ್ತೆ ಎಂದಿನಂತೆ ಅದ್ಧೂರಿಯಾಗಿ ಹಬ್ಬ ಆಚರಿಸಬಹುದಾಗಿದೆ.

ಹೀಗಾಗಿ ಗಣೇಶನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದೆ. ಜೊತೆಗೆ ವಿವಿಧ ಅವತಾರಗಳ ಗಣೇಶನ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೀಗಾಗಿ ಈ ಬಾರಿ ವ್ಯಾಪಾರಿಗಳೂ ಲಾಭವಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ