ಬಿಎಸ್‌ವೈ ಯಾಕೆ ಇಷ್ಟೊಂದು ಹಟಕ್ಕೆ ಬಿದ್ದಿದ್ದಾರೆ?: ಗೀತಾ ಮಹಾದೇವ ಪ್ರಸಾದ್

ಶುಕ್ರವಾರ, 24 ಮಾರ್ಚ್ 2017 (16:50 IST)
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಗೀತಾ ಮಹಾದೇವ ಪ್ರಸಾದ್, ಬಿಎಸ್‌ವೈ ಯಾವ ಕಾರಣಕ್ಕೆ ಇಷ್ಟೊಂದು ಹಟಕ್ಕೆ ಬಿದ್ದಿದ್ದಾರೆ?. ಹಟಕ್ಕೆ ಬಿದ್ದು ಚುನಾವಣೆಯಲ್ಲಿ ಪಾಲ್ಗೊಂಡಿದ್ದಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. 
 
ನಾನು ನನ್ನ ಜೀವನ ಸಂಗಾತಿಯನ್ನು ಕಳೆದುಕೊಂಡಿದ್ದೇನೆ. ಪತಿ ಮಹಾದೇವ ಪ್ರಸಾದ್ ಇನ್ಯಾವತ್ತೂ ಬರುವುದಿಲ್ಲ ಎನ್ನುವ ಕಾರಣಕ್ಕೆ ಕ್ಷೇತ್ರದ ಜನತೆ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
 
ಚೆಸ್ ಆಟದಲ್ಲಿ ನಾನು 10 ಬಾರಿ ಗೆದ್ದಿದ್ದೇನೆ. ಎದುರಾಳಿ ಸೋತಿದ್ದಾನೆಂದು 11 ನೇ ಬಾರಿ ಗೆಲುವು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದರು.
 
ಗುಂಡ್ಲುಪೇಟೆ ಚುನಾವಣೆ ಕಣದಲ್ಲಿ ಕಾಂಗ್ರೆಸ್‌ನ ಗೀತಾ ಮಹಾದೇವ ಪ್ರಸಾದ್, ಬಿಜೆಪಿಯ ನಿರಂಜನಕುಮಾರ್ ಸೇರಿದಂತೆ ಏಳು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ