ಈ ಭಾಗದ ರೈತರಿಗೆ ಗುಡ್ ನ್ಯೂಸ್
ಕೊರೊನಾ ಹಿನ್ನೆಲೆಯಲ್ಲಿ ರೈತರಿಗೆ ಬಿತ್ತನೆ ಬೀಜ ಸಮಸ್ಯೆಯಾಗದಂತೆ ಸಹಾಯವಾಣಿ ಆರಂಭಿಸಿ ಆ ಮೂಲಕ ಬೀಜದ ಮಾಹಿತಿ ನೀಡಲಾಗುವುದು ಎಂದು ಕೃಷಿ ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿಯಾದ ಡಾ.ಬಸವೇಗೌಡ ತಿಳಿಸಿದ್ದಾರೆ.
ಕೃಷಿ ವಿಶ್ವವಿದ್ಯಾನಿಲಯ ಮತ್ತು ರೈತರ ಮೂಲಕ ಉತ್ಪಾದಿಸಿದ ಬೀಜ ರೈತರಿಗೆ ವಿತರಣೆ ಮಾಡಲು ಸಿದ್ಧವಿದೆ. ಬೀಜ ಸೇರಿದಂತೆ ಇತರ ಮಾಹಿತಿ ಪಡೆಯಲು ರೈತರು 1800 4250 470 ಸಹಾಯವಾಣಿಗೆ ದೂರವಾಣಿ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ವಿಶೇಷವಾಗಿ ತೊಗರಿಯಲ್ಲಿ ಟಿಎಸ್ಆರ್- 36 ಮತ್ತು ಜಿಆರ್ಬಿ -811 ಮತ್ತು ಸೂರ್ಯಕಾಂತಿಯಲ್ಲಿ ಆರ್ಎಸ್ಎ-1877 ಹಾಗೂ ಶೇಂಗಾದಲ್ಲಿ ಕೆಡಿಜಿ-128 ಸೇರಿ ಸಿರಿಧಾನ್ಯದ ಎಲ್ಲಾ ಬೀಜಗಳು ಲಭ್ಯ ಇವೆ ಎಂದಿದ್ದಾರೆ.