ಎಚ್‌.ಡಿ ಕುಮಾರಸ್ವಾಮಿ ರಾಜ್ಯ ರಾಜಕಾರಣದ ಕಟ್ಟಪ್ಪ: ತೇಜಸ್ವಿನಿ

ಬುಧವಾರ, 24 ಮೇ 2017 (17:58 IST)
ಎಚ್‌.ಡಿ ಕುಮಾರಸ್ವಾಮಿ ರಾಜ್ಯ ರಾಜಕಾರಣದ ಕಟ್ಟಪ್ಪರಂತೆ ಎಂದು ಬಿಜೆಪಿ ಕಾರ್ಯದರ್ಶಿ, ಮಾಜಿ ಸಂಸದೆ ತೇಜಸ್ವಿನಿ ರಮೇಶ್ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. 
 
ಬಿಜೆಪಿ ಬಳಿ ದೇವೇಗೌಡರ ಕುಟುಂಬದ ಕುರಿತಂತೆ ಸಂಪೂರ್ಣ ಮಾಹಿತಿಯಿದೆ. ಬಾಹುಬಲಿ ಚಿತ್ರದಂತೆ 10 ಎಪಿಸೋಡ್ ಸಿರೀಯಲ್ ಮಾಡುವಷ್ಟು ಮಾಹಿತಿಯಿದೆ. ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದೂ ಈ ರೀತಿ ದೇವೇಗೌಡ, ಕುಮಾರಸ್ವಾಮಿ ಹೇಳುವುದಿಲ್ಲ ಎಂದು ಲೇವಡಿ ಮಾಡಿದರು.
 
ರಾಜಕೀಯವಾಗಿ ಕುಮಾರಸ್ವಾಮಿಯವರಿಗೆ ಅಡ್ಡಬಂದವರನ್ನು ದೇವೇಗೌಡರು ಉಳಿಸಿಲ್ಲ. ಅದಕ್ಕೆ ಜೆಡಿಎಸ್ ಬಂಡಾಯ ಶಾಸಕರ ಪರಿಸ್ಥಿತಿಯೇ ಸಾಕ್ಷಿಯಾಗಿದೆ 
 
ಬಿಎಸ್‌ವೈ ವಿರುದ್ಧ ಮಾತನಾಡುವ ಪ್ರಬುದ್ಧತೆ ಕುಮಾರಸ್ವಾಮಿಗಿಲ್ಲ. ಬಿಎಸ್‌ವೈ ವಿರುದ್ಧ ಆರೋಪ ಮಾಡುವುದನ್ನು ಮುಂದುವರಿಸಿದರೆ ಬಿಜೆಪಿ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ.
 
ಕುಮಾರಸ್ವಾಮಿ ವೈಟ್‌ಫೀಲ್ಡ್ , ಸದಾಶಿವನಗರದಲ್ಲಿ ಚಿಕ್ಕ ಚಿಕ್ಕ ಮನೆಗಳಿರುವುದಾಗಿ ಹೇಳಿದ್ದಾರೆ. ಅವರ ಸಣ್ಣ ಸಣ್ಣ ಬೇನಾಮಿ ಆಸ್ತಿಯ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಬಿಜೆಪಿ ಕಾರ್ಯದರ್ಶಿ ತೇಜಸ್ವಿನಿ ರಮೇಶ್ ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ