‘ಮೂರು ತಿಂಗಳು ಕಾಯಿರಿ, ನಾನು ಬಂದು ಎಲ್ಲಾ ಸಮಸ್ಯೆ ಸರಿ ಮಾಡ್ತೀನಿ’

ಬುಧವಾರ, 6 ಡಿಸೆಂಬರ್ 2017 (08:41 IST)
ಬೆಂಗಳೂರು: ಇನ್ನೂ  ಮೂರು ತಿಂಗಳು ಸಮಾಧಾನದಿಂದ ಕಾಯಿರಿ. ನಾನು ಸಿಎಂ ಆಗಿ 24 ಗಂಟೆಯೊಳಗೇ ರೈತರ ಎಲ್ಲಾ ಸಮಸ್ಯೆ ಸರಿ ಮಾಡ್ತೀನಿ.. ಹೀಗಂತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ  ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
 

ಮಂಡ್ಯ ಜಿಲ್ಲೆಯ ಅಭಿಮಾನಿಯೊಬ್ಬರ ಮದುವೆಗೆ ಆಗಮಿಸಿದ್ದ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮುಂದಿನ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಬಹುಮತದಿಂದ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರೈತರೇ ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಇನ್ನು ಮೂರು ತಿಂಗಳು ಕಾಯಿರಿ. ನಾನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ