‘ಹೆಚ್.ಡಿ.ಕುಮಾರಸ್ವಾಮಿ ಪಾಲಿಟಿಕ್ಸ್ ಫಿನಿಷ್'

ಶುಕ್ರವಾರ, 10 ಜನವರಿ 2020 (14:58 IST)

ರಾಜ್ಯ ರಾಜಕೀಯದಲ್ಲಿ ಮಾಜಿ ಸಿಎಂ ಅವರ ರಾಜಕೀಯ ಫಿನಿಷ್ ಆಗ್ತಿದೆ.
 

ಹೀಗಂತ ಕೇಂದ್ರ ಸಚಿವರೊಬ್ಬರು ಗಂಭೀರ ಟೀಕೆ ಮಾಡಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಹತ್ತಿರ ಇದೀಗ ಯಾವ ಅಸ್ತ್ರ ಉಳಿದಿಲ್ಲ. ಈ ಕಾರಣಕ್ಕೆ ಸಿಡಿ ಗಳನ್ನು ಹೊರಗೆ ತರುತ್ತಿದ್ದಾರೆ ಅಂತ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.

ಮಂಗಳೂರಲ್ಲಿ ನಡೆದ ಗಲಭೆ ಕುರಿತು ಹೆಚ್ಡಿಕೆ ಸಿಡಿ ಸಿಡಿಸಿದ್ದಾರೆ. ಇದಕ್ಕೆ ಟಾಂಗ್ ಕೊಟ್ಟ ಸದಾನಂದಗೌಡ, ಇಷ್ಟು ದಿನಗಳವರೆಗೆ ಕುಮಾರಸ್ವಾಮಿ ಯಾಕೆ ಸೈಲೆಂಟ್ ಆಗಿದ್ರು ಅಂತ ಪ್ರಶ್ನೆ ಮಾಡಿದ್ದಾರೆ.

 

ಅದೆಷ್ಟೋ ಸಿಡಿಗಳು ಆಗಾಗ್ಗೆ ರಾಜ್ಯದಲ್ಲಿ ಸಿಡಿಯುತ್ತಲೇ ಇವೆ. ಆದರೆ ಯಾರೂ ಜೈಲಿಗೆ ಹೋಗಿಲ್ಲ. ಅದರಿಂದ ಪರಿಣಾಮ ಏನೂ ಆಗಲ್ಲ ಅಂತ ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ