ಕೈ ಕಟ್ ಅಲ್ಲ, ಎದೆ ಬಗೆದರೂ ಮಾತಿಗೆ ಬದ್ಧ ಎಂದ ಅನರ್ಹ ಶಾಸಕ

ಭಾನುವಾರ, 20 ಅಕ್ಟೋಬರ್ 2019 (15:58 IST)

ಶಾಸಕರಿಬ್ಬರ ಮೆಗಾಫೈಟ್ ಇದೀಗ ಕೈ ಕಡೆಯೋ, ಎದೆ ಬಗೆಯೋ ಹಂತಕ್ಕೆ ಹೋಗಿ ತಲುಪಿದೆ.

 

ಅನರ್ಹ ಶಾಸಕ ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ ರೆಡ್ಡಿ ನಡುವೆ ಮೆಗಾಫೈಟ್ ನಡೆಯುತ್ತಿದೆ.

ಮಂಚೇನಹಳ್ಳಿಯನ್ನು ತಾಲೂಕು ಮಾಡಿಯೇ ಸಿದ್ಧ ಅಂತ ಸುಧಾಕರ್ ಹೇಳಿದ್ದರು. ಇದಕ್ಕೆ ರೆಡ್ಡಿ, ಗೌರಿಬಿದನೂರು ಕ್ಷೇತ್ರದ ತಂಟೆಗೆ ಬಂದರೆ ಕೈ ಕಡಿಯುವೆ ಅಂತ ಸುಧಾಕರ್ ಗೆ ಅವಾಜ್ ಹಾಕಿದ್ರು.

ಇದಕ್ಕೆ ಸವಾಲು ಹಾಕಿರೋ ಅನರ್ಹ ಶಾಸಕ ಸುಧಾಕರ್, ಕೈ ಅಲ್ಲ, ನನ್ನ ಎದೆ ಬಗೆದರೂ ಸರಿ. ಹೊಸ ತಾಲೂಕು ಕುರಿತು ನೀಡಿರೋ ಹೇಳಿಕೆ ಹಾಗೂ ಜನರಿಗೆ ಬದ್ಧನಿರೋದಾಗಿ ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ