ಪ್ರೀತಿಗೆ ನಿರಾಕರಿಸಿದ ಅಪ್ರಾಪ್ತೆಗೆ ಬೆಂಕಿ ಇಟ್ಟರು

ಸೋಮವಾರ, 3 ಡಿಸೆಂಬರ್ 2018 (20:00 IST)
ಪ್ರೀತಿಸಲು‌ ನಿರಾಕರಿಸಿ, ಪೋಷಕರಿಗೆ  ವಿಷಯ ತಿಳಿಸಿದ ಕಾರಣ  ಬಾಲಕಿಗೆ ಬೆಂಕಿ ಇಟ್ಟ ಘಟನೆ ನಡೆದಿದೆ. 

ವಿಜಯಪುರ ‌ಜಿಲ್ಲೆ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.  
14 ವರ್ಷದ ಅಪ್ರಾಪ್ತೆಗೆ ಪ್ರೀತಿಸು ಎಂದು ಇಬ್ಬರು ಬೆನ್ನು ಬಿದ್ದಿದ್ದರು. ಆ ಇಬ್ಬರಿಂದ ಕೃತ್ಯವೆಂದು‌ ಮೃತ ಬಾಲಕಿ ಪೋಷಕರ ಆರೋಪವಾಗಿದೆ.

ಪ್ರಾಜಕ್ತಾ ಬಲಭೀಮ ನರಳೆ 14 ಬೆಂಕಿಗೆ ಬಲಿಯಾದ ಅಪ್ರಾಪ್ತ ಬಾಲಕಿಯಾಗಿದ್ದಾಳೆ.
ರತ್ನಾಪುರ ಗ್ರಾಮದ ವಿವಾಹಿತ ವ್ಯಕ್ತಿ ಶಂಕರ ಹಿಪ್ಪರಕರ  24 ಹಾಗೂ ಮೋಹನ್ ಎಡವೆ 19 ಎಂಬುವವರಿಂದ ಕೃತ್ಯ ನಡೆದಿದೆ ಎಂದು ಆರೋಪ ಮಾಡಲಾಗುತ್ತಿದೆ.

ಕೆಲವು‌ ದಿನಗಳಿಂದಲೂ‌  ಪ್ರೀತಿಸಬೇಕೆಂದು ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದರಂತೆ. ಇಬ್ಬರ ಪ್ರೀತಿಗೆ ಬಾಲಕಿ ನಿರಾಕರಿಸಿದ್ದಳಂತೆ. ಇಬ್ಬರ ಕಿರುಕುಳ ಅತಿಯಾದ ವೇಳೆಯಲ್ಲಿ ಬಾಲಕಿ ತನ್ನ ಮನೆಯಲ್ಲಿ  ಕಳೆದ ಶುಕ್ರವಾರ ವಿಷಯ  ತಿಳಿಸಿದ್ದಾಳೆ. ನಂತರ ಶನಿವಾರ ಶಾಲೆ ಬಿಡಿಸಿ ಮನೇಲಿ ಬಾಲಕಿಯನ್ನು ಪೋಷಕರು ಇಟ್ಟಿದ್ದರು.

ಮನೇಲಿ ಬಾಲಕಿ ವಿಷಯ ತಿಳಿಸಿದ್ದಾಳೆಂದು ತಿಳಿದ ಇಬ್ಬರು, ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ. ಈ ಕುರಿತು ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ