ಜೋಳದ ರಾಶಿ ಬೆಂಕಿಗೆ ಆಹುತಿ: ರೈತ ಕಂಗಾಲು

ಶನಿವಾರ, 1 ಡಿಸೆಂಬರ್ 2018 (20:51 IST)
ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಮುಸುಕಿನ ಜೋಳದ ರಾಶಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ. ಹಾವೇರಿ  ತಾಲೂಕಿನ ಗುತ್ತಲ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಗುತ್ತಲ ಪಟ್ಟಣದ ಮಲ್ಲಕಪ್ಪ ನಂದಿ ಎಂಬುವವರಿಗೆ ಸೇರಿದ ಮುಸುಕಿನ ಜೋಳದ ರಾಶಿ ಸಂಪೂರ್ಣ ಭಸ್ಮವಾಗಿದೆ. ಇವರು ತಮ್ಮ ಹೊಲದಲ್ಲಿ ಸಂಗ್ರಹಿಸಿದ್ದ 2 ಲಕ್ಷ ರೂ. ಗಳಿಗೂ ಹೆಚ್ಚಿನ ಮೌಲ್ಯದ, 10 ಟ್ರ್ಯಾಕ್ಟರ್ ಮುಸುಕಿನ ಜೋಳದ ರಾಶಿಯು ಆಕಸ್ಮಿಕ ಬೆಂಕಿಯಿಂದ ಸುಟ್ಟು ಕರಕಲಾಗಿದೆ.

ರಾಶಿಯ ಮಾಲಿಕ ರೈತ ಮಲ್ಲಕ್ಕಪ್ಪ ಮುಸುಕಿನ ಜೋಳ ನಾಶವಾಗಿದಕ್ಕೆ ನೊಂದು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಕುರಿತು ಗುತ್ತಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ