ಗವರ್ನರ್ ಬಳಸಿ ಬಿಜೆಪಿಯೇತರ ಸರ್ಕಾರಕ್ಕೆ ಕಿರುಕುಳ ಕೊಡುವುದೇ ಇವರ ಕೆಲಸ: ಮಲ್ಲಿಕಾರ್ಜುನ ಖರ್ಗೆ
ಕಾನೂನು ತಜ್ಞರೊಂದಿಗೆ ಕೇಳಿಕೊಂಡು ಏನು ಮಾಡಬೇಕೋ ಮಾಡುವುದು ಒಳ್ಳೆಯದು. ಎಲ್ಲಾ ಕಡೆ ಬಿಜೆಪಿ ಗವರ್ನರ್ ಬಳಸಿಕೊಂಡು ಬಿಜೆಪಿಯೇತರ ಸರ್ಕಾರಗಳಿಗೆ ಕಿರುಕುಳ ನೀಡುತ್ತಲೇ ಬಂದಿದೆ. ಕರ್ನಾಟಕ, ತಮಿಳುನಾಡು, ದೆಹಲಿ ಹೀಗೆ ಎಲ್ಲಾ ಕಡೆ ಮಾಡುತ್ತಾ ಬಂದಿದೆ ಎಂದು ಆಕ್ರೋಶ ಹೊರಹಾಕಿದರು.