ಸೀಲ್ಡೌನ್ ಪ್ರದೇಶದಲ್ಲಿ ಗೃಹ ಸಚಿವ
ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸೀಲ್ ಡೌನ್ ಪ್ರದೇಶಕ್ಕೆ ಭೇಟಿ ನೀಡಿದ್ದರು.
ಆಹಾರ ಕಿಟ್ಗಳ ವಿತರಣೆ, ಅಗತ್ಯ ವಸ್ತುಗಳ ಪೂರೈಕೆ, ಜನರ ಆರೋಗ್ಯ ತಪಾಸಣೆ, ಸ್ವಚ್ಛತಾ ಕಾರ್ಯಗಳ ಪರಿಶೀಲನೆ ನಡೆಸಿದರು. ಅಧಿಕಾರಿಳಿಗೆ ಕೈಗೊಳ್ಳಬೇಕಾದ ಹೆಚ್ಚುವರಿ ಕ್ರಮಗಳ ಕುರಿತಂತೆ ಸೂಚನೆ ನೀಡಿದರು.
ಬಂಕಾಪುರಕ್ಕೆ ಕೋವಿಡ್ -19 ಸೋಂಕು ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕಿತ ಸಂಪರ್ಕಿತರ ಲ್ಯಾಬ್ ವರದಿಗಳು ಈ ವಾರದಲ್ಲಿ ಬರಲಿವೆ. ತ್ವರಿತವಾಗಿ ಸೀಲ್ಡೌನ್ ತೆರವುಗೊಳಿಸಲಾಗುವುದು ಎಂದಿದ್ದಾರೆ.