ಜಾತಿಗಣತಿಗೆ ಯಾರೂ ಮನೆಗೆ ಬಂದೇ ಇಲ್ಲ, ಸಮೀಕ್ಷೆ ಹೇಗಾಯ್ತು
ಈ ಬಗ್ಗೆ ನಿನ್ನೆ ಮಾಧ್ಯಮಗಳ ಮುಂದೆ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ ನಮ್ಮ ಮನೆಗಾಗಲೀ ತಾತನ ಮನೆಗಾಗಲೀ ಯಾರೂ ಸಮೀಕ್ಷೆ ನಡೆಸಲು ಬಂದೇ ಇಲ್ಲ. ಹಾಗಿದ್ದರೆ ಈ ಜಾತಿಗಣತಿ ಯಾವ ಆಧಾರದಲ್ಲಿ ನಡೆಯಿತು ಎಂದು ಪ್ರಶ್ನೆ ಮಾಡಿದ್ದಾರೆ.
ಸಾರ್ವಜನಿಕರೂ ಸೋಷಿಯಲ್ ಮೀಡಿಯಾಗಳಲ್ಲಿ ಇದೇ ಪ್ರಶ್ನೆ ಮಾಡುತ್ತಿದ್ದಾರೆ. ನಮ್ಮ ಮನೆಗೆ ಇದುವರೆಗೆ ಯಾವುದೇ ಅಧಿಕಾರಿಗಳೂ ಜಾತಿಗಣತಿ ಮಾಡಲು ಬಂದಿಲ್ಲ. ಹಾಗಿದ್ದರೆ ಈ ಸಮೀಕ್ಷೆ ವರದಿ ತಯಾರಾಗಿದ್ದು ಹೇಗೆ ಮತ್ತು ಯಾವ ಆಧಾರದಲ್ಲಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಏಪ್ರಿಲ್ 17 ರಂದು ಸಿಎಂ ಸಿದ್ದರಾಮಯ್ಯ ಜಾತಿಗಣತಿ ಸಮೀಕ್ಷಾ ವರದಿ ಹೊರಹಾಕಲು ಸಿದ್ಧತೆ ನಡೆಸಿದ್ದಾರೆ. ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಸಂಚಲನ ಸೃಷ್ಟಿಸುವ ಸಾಧ್ಯತೆಯಿದೆ.